ಮಂಗಳೂರು : ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ನಗರಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎನ್ನುವ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಪ್ರಮುಖ ರೈಲು ನಿಲ್ದಾಣ ಮಂಗಳೂರು ಜಂಕ್ಷನ್ ನಿಂದ ನಗರಕ್ಕೆ ಸೂಕ್ತ ಬಸ್ ಸೌಕರ್ಯವಿಲ್ಲದೇ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಹಂಪನಕಟ್ಟೆಯಿಂದ ಸುಮಾರು 5ಕಿಲೋ ಮೀಟರ್ ದೂರದ ಪಡೀಲ್ ಸಮೀಪದಲ್ಲಿದೆ. ಪ್ರಸ್ತುತ ಇಲ್ಲಿಗೆ ಹಗಲಿನ ವೇಳೆ ವಿವಿಧ ಕಡೆಗಳಿಂದ ಹಲವು ರೈಲುಗಳು ಬರುತ್ತಿವೆ. ನಗರಕ್ಕೆ ಬರಲು ಕಾರು ಅಥವಾ ಆಟೊ ರಿಕ್ಷಾಗಳನ್ನೇ ಆಶ್ರಯಿಸಬೇಕಾಗಿದೆ. ಇಲ್ಲದಿದ್ದರೆ 1ಕಿಲೋ ಮೀಟರ್ ನಡೆದುಕೊಂಡು ಹೋಗಿ ಸಿಟಿಬಸ್ಸುಗಳಲ್ಲಿ ಬರಬೇಕಿದೆ. ಲಗೇಜುಗಳನ್ನು ಹೊತ್ತು ಕೊಂಡು ನಡೆಯುವುದು ಅಸಾಧ್ಯ ರೈಲು ನಿಲ್ದಾಣಕ್ಕಿಂತ 2 ಸಿಟಿಬಸ್ಸುಗಳು ಕೋರೋಣ ಲೊಕ್ಡೌನ್ ಬಳಿಕ ಸ್ಥಗಿತಗೊಂಡಿದೆ.