ಮಂಗಳೂರು : ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ್ನು ತಾಲಿಬಾನಿ ಉಗ್ರರು ವಶಪಡಿಸಿಕೊಂಡ ನಂತರ ತಾಲೀಬಾನ್ ಅಟ್ಟಹಾಸಕ್ಕೆ ಅಫ್ಘಾನ್ ಪ್ರಜೆಗಳು ದಿಕ್ಕಾಪಾಲಾಗಿ ಜೀವ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಅದಲ್ಲದೆ ತಾಲಿಬಾನ್ ರಕ್ಕಸರ ಕ್ರೂರತನದಿಂದ ಎಷ್ಟೋ ನಾಗರಿಕರು ಸಾವನ್ನಪ್ಪಿದ್ದಾರೆ.
ಈ ವಿಚಾರವನ್ನು ತಿಳಿದು ಭಾರತದಲ್ಲಿರುವ ಆಫ್ಘಾನಿಸ್ತಾನೀಯರು ತಮ್ಮ ಕುಟುಂಬಸ್ಥರು, ಮನೆಯವರ ಬಗ್ಗೆ ಬಹಳ ಆತಂಕಕ್ಕೀಡಾಗಿದ್ದಾರೆ. ಹಾಗೆಯೇ ಮಂಗಳೂರು ವಿವಿ ಮತ್ತು ಎನ್.ಎನ್.ಎಮ್.ಪಿ.ಟಿಯಲ್ಲಿ ವಾಸ ಇರುವ ಆಫ್ಘಾನಿಸ್ತಾನದ 58 ವಿದ್ಯಾರ್ಥಿಗಳಿಗೆ ಮತ್ತು ಅಲ್ಲಿರುವ ಪ್ರಜೆಗಳು ಚಿಂತಿತರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಅವರು ಮಂಗಳೂರು ವಿವಿ ಮತ್ತು ಎನ್.ಎನ್.ಎಮ್.ಪಿ.ಟಿಯಲ್ಲಿ ವಾಸ ಇರುವ ಆಫ್ಘಾನಿಸ್ತಾನದ 58 ವಿದ್ಯಾರ್ಥಿಗಳು ಮತ್ತು ಅಲ್ಲಿರುವ ಪ್ರಜೆಗಳ ಜೊತೆ ತನ್ನ ಕಚೇರಿಯಲ್ಲಿ ಮಾತನಾಡಿ ಧೈರ್ಯ ತುಂಬಿದರು.