ಬೆಳ್ತಂಗಡಿ : ಕಳೆದ ಜ.22ರಂದು ಬಣಕಲ್ ನಲ್ಲಿ ಸಂಭವಿಸಿದ ವಾಹನ ಅಪಘಾತದ ಗಾಯಾಳು ಫೆ.9ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು.
ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿ1 ಗ್ರಾಮದ ಗುರಿಪಳ್ಳ ನಿವಾಸಿ ಲಕ್ಷ್ಮಣ ಆಚಾರ್ಯ ಎಂಬವರ ಪುತ್ರ ಹರೀಶ್(23) ಮೃತ ಪಟ್ಟ ಯುವಕ. ಪೀಠೋಪಕರಣ ತಯಾರಿ ವೃತ್ತಿ ನಡೆಸುತ್ತಿದ್ದು,ಮನೆಗೆ ಆಧಾರ ಸ್ತಂಭ ವಾಗಿದ್ದ ಅವರು ಬಣಕಲ್ ನಲ್ಲಿ ವ್ಯವಹಾರ ನಿಮಿತ್ತ ತನ್ನ ಗೆಳೆಯನ ಜತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತಂದೆ,ತಾಯಿ,ಸಹೋದರ ಇದ್ದಾರೆ.