ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ನಡೆದು, 2022 ನೇ ವರ್ಷಕ್ಕೆ ಅಧ್ಯಕ್ಷರಾಗಿ ಸಂಜೆವಾಣಿ ವರದಿಗಾರ ಧನಕೀರ್ತಿ ಆರಿಗ, ಕಾರ್ಯದರ್ಶಿಯಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ ಆಯ್ಕೆಯಾಗಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಅಚುಶ್ರೀ ಬಾಂಗೇರು ವಹಿಸಿದ್ದರು. ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಲಾಯಿತು. ಬಳಿಕ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಉಪಾಧ್ಯಕ್ಷರಾಗಿ ಪ್ರಜಾವಾಣಿಯ ಗಣೇಶ ಶಿರ್ಲಾಲು, ಜತೆಕಾರ್ಯದರ್ಶಿಯಾಗಿ ಜಯಕಿರಣದ ಅಶ್ರಫ್ ಆಲಿ ಕುಂಞ, ಕೋಶಾಧಿಕಾರಿಯಾಗಿ ಸಂಯುಕ್ತ ಕರ್ನಾಟಕದ ಪುಷ್ಪರಾಜ ಶೆಟ್ಟಿ ಆಯ್ಕೆಯಾದರು. ಹಿರಿಯ ಸದಸ್ಯ ಆರ್.ಎನ್.ಪೂವಣಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಸದಸ್ಯರಾಗಿ ದೇವಿ ಪ್ರಸಾದ್, ಆರ್.ಎನ್.ಪೂವಣಿ, ಶ್ರೀನಿವಾಸ ತಂತ್ರಿ, ಮಂಜುನಾಥ ರೈ, ಬಿ.ಎಸ್.ಕುಲಾಲ್, ಜಾರಪ್ಪ ಪೂಜಾರಿ, ಮನೋಹರ ಬಳಂಜ, ಭುವನೇಶ್ವರ, ಅಚುಶ್ರೀ ಬಾಂಗೇರು, ದೀಪಕ ಆಠವಳೆ, ಶಿಬಿ ಧರ್ಮಸ್ಥಳ, ಪದ್ಮನಾಭ, ಹೃಷಿಕೇಶ್, ಪ್ರಸಾದ ಶೆಟ್ಟಿ , ಸಂಜೀವ ಎನ್.ಸಿ., ಅರವಿಂದ ಹೆಬ್ಬಾರ ಮುಂದುವರಿಯಲಿದ್ದಾರೆ. ಸಭೆಯಲ್ಲಿ ಸಂಘದ ನೋಂದಣಿಯನ್ನು ನವೀಕರಿಸುವುದು ಎಂದು ತೀರ್ಮಾನಿಸಲಾಯಿತು.