ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲ್ ಮನೆಯಂಗಳದಲ್ಲಿ ಪ್ರತಿವರ್ಷ ಸಂಗೀತಾಭ್ಯಾಸಿಗಳಿಗೆ ನಡೆಯುತ್ತಿರುವ ಕರುಂಬಿತ್ತಿಲ್ ಸಂಗೀತ ಶಿಬಿರವು ಮೇ 8 ರಿಂದ ಮೊದಲ್ಗೊಂಡು ಮೇ 12 ರ ವರೆಗೆ ನಡೆಯಲಿದೆ.
ಈ ಬಾರಿ ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಮೊಮ್ಮಗ ವಿದ್ವಾನ್ ರಾಜಕುಮಾರ್ ಭಾರತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ, ಅಭಿಷೇಕ್ ರಘುರಾಮ್ ಮತ್ತು ಇತರ ಗಣ್ಯ ಸಂಗೀತ ಕಲಾವಿದರು ಶಿಬಿರ ನಡೆಸಿಕೊಡಲಿದ್ದಾರೆ.
ಶಿಬಿರದಲ್ಲಿ ಶಿಬಿರಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಸ್ಪರ್ಧೆಗಳು,ಪ್ರಾತ್ಯಕ್ಷಿಕೆಗಳು,
ಸಂಗೀತ ಕಲಾಸಕ್ತ ವಿದ್ಯಾರ್ಥಿಗಳು ಹಾಗು ಸಂಗೀತಾಭಿಮಾನಿಗಳನ್ನು ಕಾರ್ಯಕ್ರಮ ಸಂಯೋಜಕ ಕರುಂಬಿತ್ತಿಲ್ ಕುಟುಂಬದ ವಿದ್ವಾನ್ ವಿಠ್ಠಲ ರಾಮಮೂರ್ತಿ ಅವ ರು ಪ್ರಕಟಣೆಯಲ್ಲಿ ತಿಳಿಸಿದ್ದ್ದಾರೆ