News Karnataka Kannada
Tuesday, April 30 2024
ಮಂಗಳೂರು

ಬಂಗಾಡಿ ವ್ಯವಸಾಯಿಕ ಸಹಕಾರಿ ಸಂಘದ ಕಾರ್ಯವೈಖರಿ ಅಧ್ಯಯನಕ್ಕಾಗಿ ತಮಿಳುನಾಡು ತಂಡ ಭೇಟಿ

Bltng (1)
Photo Credit : By Author

ಬೆಳ್ತಂಗಡಿ: ಬಂಗಾಡಿ ವ್ಯವಸಾಯಿಕ ಸಹಕಾರಿ ಸಂಘದ ಕಾರ್ಯವೈಖರಿ ಅಧ್ಯಯನಕ್ಕಾಗಿ ತಮಿಳುನಾಡು ರಾಜ್ಯದ ಡಿಸಿಸಿ ಬ್ಯಾಂಕ್ ಮತ್ತು ಪ್ಯಾಕ್ಸ್ ಅಧಿಕಾರಿಗಳ 30 ಜನ ಸದಸ್ಯರ ತಂಡವು ನಾವೂರು , ಕಿಲ್ಲೂರು ಶಾಖೆಗಳಿಗೆ ಭೇಟಿ ನೀಡಿತು.

ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಸಾಲ ಯೋಜನೆ ಮತ್ತು ಮಾರಾಟ ವ್ಯವಹಾರಗಳ ಮಾಹಿತಿ ನೀಡಿದರು. ನಬಾರ್ಡ್ ಸಂಸ್ಥೆಯ ಡಿ.ಡಿ.ಎಂ. ಸಂಜೀವಿ ಎಲ್, ಸಂಘದ ಉಪಾಧ್ಯಕ್ಷ ವಸಂತಗೌಡ ಕೆ, ನಿರ್ದೇಶಕರಾದ ಎ.ಬಿ.ಉಮೇಶ್, ವಿಜಯಾ, ಸಿಇಒ ದಯಾನಂದ ಶೆಟ್ಟಿಗಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಘವು 2021-22 ನೇ ಸಾಲಿನಲ್ಲಿ 5,062 ಸದಸ್ಯರನ್ನು ಹೊಂದಿದ್ದು,775 ಕೋಟಿ ರೂ. ವ್ಯವಹಾರ ನಡೆಸಿದೆ. 135 ಕೋಟಿಗೂ ಮಿಕ್ಕಿ ಸಾಲ ನೀಡಿದ್ದು ಇದರಲ್ಲಿ 67.28 ಕೋಟಿ ರೂ. ಕೃಷಿ ಸಾಲ ವಿತರಿಸಿದೆ. 7 ಪೂರ್ಣಪ್ರಮಾಣದ ಶಾಖೆಗಳನ್ನು ಹೊಂದಿದ್ದು 9 ಕೋಟಿ ರೂ. ಮಾರಾಟ ವ್ಯವಹಾರ ನಡೆಸಿದೆ.

ಸಂಘದ ವ್ಯವಹಾರವು ನಬಾರ್ಡ್ ನ ಗಮನವನ್ನು ಸೆಳೆದಿದ್ದು, ಅಧ್ಯಯನ ಪ್ರವಾಸವನ್ನು ರೂಪಿಸಲಾಗಿತ್ತು.ಸಂಘವು ಅಪೆಕ್ಸ್ ಬ್ಯಾಂಕ್ ನಿಂದ ಅತ್ಯುತ್ತಮ ಸಹಕಾರ ಸಂಘ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅದೇ ರೀತಿ ತಂಡವು ಮುಂಡಾಜೆ ಪಾಕ್ಸ್ ಗೆ ಭೇಟಿನೀಡಿ ಮಾಹಿತಿ ಪಡಕೊಂಡಿತು. ನಬಾರ್ಡ್ ನ ಡಿ.ಜಿ ಎಂ ಸಂಜೀವಿಯವರು ತಂಡದೊಂದಿಗೆ ಆಗಮಿಸಿ ವಿಚಾರ ವಿನಿಮಯ ನಡೆಸಿದರು.ಸಂಘದ ಅಧ್ಯಕ್ಷ ಜನಾರ್ದನ ಗೌಡ ಸಿ ಇ ಒ ನಾರಾಯಣ ಫಡಕೆ ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು