ಬೆಳ್ತಂಗಡಿ: ಬಂಗಾಡಿ ವ್ಯವಸಾಯಿಕ ಸಹಕಾರಿ ಸಂಘದ ಕಾರ್ಯವೈಖರಿ ಅಧ್ಯಯನಕ್ಕಾಗಿ ತಮಿಳುನಾಡು ರಾಜ್ಯದ ಡಿಸಿಸಿ ಬ್ಯಾಂಕ್ ಮತ್ತು ಪ್ಯಾಕ್ಸ್ ಅಧಿಕಾರಿಗಳ 30 ಜನ ಸದಸ್ಯರ ತಂಡವು ನಾವೂರು , ಕಿಲ್ಲೂರು ಶಾಖೆಗಳಿಗೆ ಭೇಟಿ ನೀಡಿತು.
ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಸಾಲ ಯೋಜನೆ ಮತ್ತು ಮಾರಾಟ ವ್ಯವಹಾರಗಳ ಮಾಹಿತಿ ನೀಡಿದರು. ನಬಾರ್ಡ್ ಸಂಸ್ಥೆಯ ಡಿ.ಡಿ.ಎಂ. ಸಂಜೀವಿ ಎಲ್, ಸಂಘದ ಉಪಾಧ್ಯಕ್ಷ ವಸಂತಗೌಡ ಕೆ, ನಿರ್ದೇಶಕರಾದ ಎ.ಬಿ.ಉಮೇಶ್, ವಿಜಯಾ, ಸಿಇಒ ದಯಾನಂದ ಶೆಟ್ಟಿಗಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘವು 2021-22 ನೇ ಸಾಲಿನಲ್ಲಿ 5,062 ಸದಸ್ಯರನ್ನು ಹೊಂದಿದ್ದು,775 ಕೋಟಿ ರೂ. ವ್ಯವಹಾರ ನಡೆಸಿದೆ. 135 ಕೋಟಿಗೂ ಮಿಕ್ಕಿ ಸಾಲ ನೀಡಿದ್ದು ಇದರಲ್ಲಿ 67.28 ಕೋಟಿ ರೂ. ಕೃಷಿ ಸಾಲ ವಿತರಿಸಿದೆ. 7 ಪೂರ್ಣಪ್ರಮಾಣದ ಶಾಖೆಗಳನ್ನು ಹೊಂದಿದ್ದು 9 ಕೋಟಿ ರೂ. ಮಾರಾಟ ವ್ಯವಹಾರ ನಡೆಸಿದೆ.
ಸಂಘದ ವ್ಯವಹಾರವು ನಬಾರ್ಡ್ ನ ಗಮನವನ್ನು ಸೆಳೆದಿದ್ದು, ಅಧ್ಯಯನ ಪ್ರವಾಸವನ್ನು ರೂಪಿಸಲಾಗಿತ್ತು.ಸಂಘವು ಅಪೆಕ್ಸ್ ಬ್ಯಾಂಕ್ ನಿಂದ ಅತ್ಯುತ್ತಮ ಸಹಕಾರ ಸಂಘ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಅದೇ ರೀತಿ ತಂಡವು ಮುಂಡಾಜೆ ಪಾಕ್ಸ್ ಗೆ ಭೇಟಿನೀಡಿ ಮಾಹಿತಿ ಪಡಕೊಂಡಿತು. ನಬಾರ್ಡ್ ನ ಡಿ.ಜಿ ಎಂ ಸಂಜೀವಿಯವರು ತಂಡದೊಂದಿಗೆ ಆಗಮಿಸಿ ವಿಚಾರ ವಿನಿಮಯ ನಡೆಸಿದರು.ಸಂಘದ ಅಧ್ಯಕ್ಷ ಜನಾರ್ದನ ಗೌಡ ಸಿ ಇ ಒ ನಾರಾಯಣ ಫಡಕೆ ಮಾಹಿತಿ ನೀಡಿದರು.