ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿ ಪ್ರೀತಿಸಿದ ಹುಡುಗಿ ಜೊತೆ ಮನಸ್ತಾಪದ ಕಾರಣಕ್ಕೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಕುಳಿತು ಕೆಲ ಕಾಲ ಫಜೀತಿ ಸೃಷ್ಟಿಸಿದ್ದಾನೆ.
ಕೊಡ್ಮಾಣ್ ಕಂಜಾರ ಎಂಬಲ್ಲಿನ ನಿವಾಸಿ ಸುಧೀರ್ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ.
ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದರಿಂದ ಅಡ್ಯಾರ್ ಬಳಿಯ ಆರ್ಕೆ ಬಿಲ್ಡಿಂಗ್ನ ಮೇಲಿದ್ದ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ.
ಪೊಲೀಸರು, ಸ್ಥಳೀಯರು ಆತನ ಮನವೊಲಿಕೆಗೆ ಯತ್ನಿಸಿದ್ದರೂ ಫಲಕಾರಿಯಾಗಲಿಲ್ಲ. ಬಳಿಕ ಆತನ ಪ್ರೇಮಿ ಬಂದ ಬಳಿಕವೇ ಟವರ್ನಿಂದ ಕೆಳಗಿಳಿದಿದ್ದಾನೆ. ಮಂಗಳೂರು ನಗರ ಹೊಯ್ಸಳ ತಂಡದ ಪೊಲೀಸರು ಈ ಯುವಕನನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದಾರೆ.