Categories: ಮಂಗಳೂರು

ಪ್ರಾಚೀನ ಕಾವ್ಯವನ್ನು ಆಧುನಿಕ ಕಾಲಕ್ಕೆ ಕೊಡುವ ಪ್ರಯತ್ನದ ಫಲ‘ಚಾರುವಸಂತ’:ಹಂಪ ನಾಗರಾಜಯ್ಯ

ರಾಮಾಯಣ, ಮಹಾಭಾರತದಷ್ಟೇ ಪ್ರಾಚೀನವಾದ ಮತ್ತು ಶ್ರೇಷ್ಠ ಕೃತಿಯ ಮೂಲದಿಂದ ಮೂಡಿದ ಮಹಾಕಾವ್ಯ ಚಾರುವಸಂತ ಎಂದು ನಾಡೋಜ ಹಂಪ ನಾಗರಾಜಯ್ಯ ತಿಳಿಸಿದರು.

2022 ಏಪ್ರಿಲ್‌ 10 ಭಾನುವಾರದಂದು ಬೆಳಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಮಾನಪುರದ ಕೈರಳೀ ನಿಲಯಂ ಸ್ಕೂಲಿನ ಆವರಣದಲ್ಲಿ ನಡೆದ ‘ಚಾರುವಸಂತ’ ಮಲಯಾಳಂ ಭಾಷೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`2003 ರಲ್ಲಿ ‘ಚಾರುವಸಂತ’ ಎಂಬ ಕಾವ್ಯ ಬರೆದೆ. ನನ್ನ ಮಾತೃಭಾಷೆ, ಕನ್ನಡದಲ್ಲಿ ಈ ಮಹಾಕಾವ್ಯ ಬರೆದೆ. ನಾನು ಪ್ರಧಾನವಾಗಿ ಸಂಶೋಧಕ, ಗಂಭೀರ ಸಾಹಿತ್ಯದಲ್ಲಿ ನನ್ನ ಅಧ್ಯಯನ, ಆಸಕ್ತಿ ಇದ್ದದ್ದು. ಆದರೆ ಒಮ್ಮೆಲೆ ಶ್ರೇಷ್ಠ ಕನ್ನಡ ಕಾವ್ಯವನ್ನ ಓದುತ್ತಾ ನನ್ನೊಳಗೆ ಒಬ್ಬ ಕವಿ ಮೂಡಿದ್ದ, ಇದ್ದಕ್ಕಿದ್ದಂತೆ ತಾಯಿ ಶಾರದೆ ನನ್ನ ಕನಸ್ಸಿನಲ್ಲಿ ಕಾಣಿಸಿಕೊಂಡು ಈ ಮಹಾಕಾವ್ಯ ರಚಿಸಲು ತಿಳಿಸಿದಳು. ಒಂದೇ ತಿಂಗಳಲ್ಲಿ ಈ ಕಾವ್ಯವನ್ನು ಬರೆದೆ’ ಎಂದರು.

ಜೊತೆಗೆ, ಚಾರುವಸಂತ ಬಹಳ ಪ್ರಾಚೀನ ಕತೆ, ಗುಣಾಡ್ಯನ ಬೃಹತ್ ಕತೆ ಸಂಸ್ಕೃತದಲ್ಲಿ ಕ್ರಿಸ್ತಪೂರ್ವ 2ನೇ ಶತಮಾನದಲ್ಲಿ ರಚನೆಯಾದರೆ ಮುಂದೆ ಹಲವು ಭಾಷೆಗಳಲ್ಲಿ ಈ ಕತೆ ಬೆಳೆಯುತ್ತಾ ಹೋಯಿತು. ಇದೇ ಕತೆಯನ್ನು ಮೂಲವಾಗಿರಿಸಿ ಚಾರುವಸಂತ ಮಹಾಕಾವ್ಯ ರಚನೆಯಾಗಿದೆ. ಪ್ರಾಚೀನ ಕೃತಿಗಳನ್ನು ಆಧುನಿಕ ಕಾಲಕ್ಕೆ ಕೊಡಬೇಕೆನ್ನುವ ಆಶಯದೊಂದಿಗೆ ರಚನೆಯಾದ ಕಾವ್ಯವಿದು. ಈ ಮಹಾಕಾವ್ಯ ಹದಿನೈದು ಭಾಷೆಗಳಿಗೆ ಅನುವಾದಗೊಂಡಿದೆ. ಈಗ ಮಲಯಾಳಂ ಲೇಖಕ, ಅನುವಾದಕ ಪಯ್ಯನೂರು ಕುಂಜಿರಾಮನ್ ಅವರು ಮಲೆಯಾಳಂಗೆ ಅನುವಾದಿಸಿರುವ ಕೃತಿ ಬಿಡುಗಡೆಯಾಗುತ್ತಿದೆ. ಇದು ಬಹಳ ಸಂಭ್ರಮದ ವಿಚಾರ. ಮಲಯಾಳಂಗೂ ನನಗೂ ಅವಿನಾಭಾವ ಸಂಬಂಧವಿದೆ, ಅಲ್ಲಿ ನನ್ನ ಅನೇಕ ಬಂಧುಗಳಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಜೊತೆಗೆ, ಮಹಾಕಾವ್ಯ ಚಾರುವಸಂತದ ಕುರಿತು ವಿವರಿಸಿದರು. ಇದೇ ವೇಳೆ, ಮಲಯಾಳಂ ಸಾಹಿತ್ಯ ಮತ್ತು ಸಾಹಿತಿಗಳೊಂದಿಗೆ ತಮ್ಮ ಒಡನಾಟವನ್ನು ನೆನೆದರು.
ಮಲಯಾಳಂ ಅನುವಾದಿತ ಚಾರುವಸಂತ ಕೃತಿ ಲೋಕಾರ್ಪಣಾ ಸಮಾರಂಭ:

ಕನ್ನಡದ ಬಹುಮುಖ್ಯ ಲೇಖಕರ ಕೃತಿಗಳನ್ನು ಮಲಯಾಳಂ ಗೆ ಅನುವಾದಿಸಿ ಪ್ರಕಟಿಸಿರುವ ಮಾತೃಭೂಮಿ ಸಂಸ್ಥೆ ಈ ಕೃತಿಯನ್ನು ಪ್ರಕಟಿಸಿದ್ದು, ಮಾತೃಭೂಮಿ ಸಂಸ್ಥೆಯ ನಿರ್ದೇಶಕ ಶ್ರೀ ವಿಜಯಪದ್ಮನ್ ಅವರ ಮಗಳು ಮೇಘ ವಿಜಯಪದ್ಮನ್ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರು ಮಾತನಾಡಿ, ಭಾರತ ಸಾಹಿತ್ಯಲೋಕದ ಬಹುಮುಖ್ಯ ಕೃತಿಗಳಲ್ಲಿ ಚಾರುವಸಂತ ಮಹಾಕಾವ್ಯವೂ ಒಂದು. ಪ್ರಾಚೀನ ಕೃತಿಯ ಮೂಲದಿಂದ ಆಧುನಿಕ ಕಾಲ ಘಟಕ್ಕೆ ಹೊಂದುವಂತೆ ಕಾವ್ಯವನ್ನು ರಚಿಸಿರುವ ಹಂಪ ನಾಗರಾಜಯ್ಯ ಅವರು ಮೂಲಕೃತಿಗಿಂತಲೂ ಭಿನ್ನವಾಗಿ ಈ ಮಹಾಕಾವ್ಯವನ್ನು ರಚಿಸಿದ್ದಾರೆ ಎಂದರು. ಅಲ್ಲದೇ ಕನ್ನಡದ ಪ್ರಮುಖ ಲೇಖಕರಾದ ಯು.ಆರ್. ಅನಂತಮೂರ್ತಿ, ಕೃಷ್ಣ ಆಲನಹಳ್ಳಿ, ನಿರಂಜನ ಸೇರಿದಂತೆ ಹಲವು ಶ್ರೇಷ್ಠ ಲೇಖಕರ ಕೃತಿಯನ್ನು ಅನುವಾದಿಸಿ ಪ್ರಕಟಿಸಿರುವ ಮಾತೃಭೂಮಿ ಸಂಸ್ಥೆ ಚಾರುವಸಂತವನ್ನು ಪ್ರಕಟಿಸುತ್ತಿರುವುದು ಸಂತಸದ ವಿಚಾರ ಎಂದರು.

ಅನುವಾದಕ ಪಯ್ಯನೂರು ಕುಂಜಿರಾಮನ್, ಮೋಹನ ಕುಂಟಾರ್, ನಾಡೋಜ ಕಮಲಾ ಹಂಪನ, ನಾಡೋಜ ಹಂಪ.ನಾಗರಾಜ್ಯ, ಸುಧೀಶ್ ಪಿ.ಕೆ., ಸುಧಾಕರನ್ ರಾಮಂಥಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Swathi MG

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

4 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

4 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

5 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

5 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

6 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

6 hours ago