News Karnataka Kannada
Tuesday, April 30 2024
ಮಂಗಳೂರು

ಪುತ್ತೂರು: ಬಾಲಕಾರ್ಮಿಕ ಪದ್ಧತಿ‌ ಕುರಿತ ಜನಜಾಗೃತಿ ಬೀದಿನಾಟಕ‌ ಜಾಥಾ

Child Labour
Photo Credit :

ಪುತ್ತೂರು: ದ.ಕ.ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ ಜಿಲ್ಲೆಯಾದ್ಯಂತ ನಡೆದ ಬಾಲಕಾರ್ಮಿಕ ಪದ್ಧತಿ‌ ಕುರಿತ ಜನಜಾಗೃತಿ ಬೀದಿನಾಟಕ‌ ಜಾಥಾ ಪುತ್ತೂರಿನಲ್ಲಿ ಸಮಾಪನಗೊಂಡಿತು.

 ಇಲ್ಲಿನ  ಪಡೀಲು ಕನಕದಾಸ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮ ವನ್ನು ಇಲ್ಲಿನ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬಾಬು ಹಾಗೂ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರೀಶ್  ತಮ್ಕಿ ಬಾರಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭ ಸಮಾರೋಪದ ಮಾತುಗಳನ್ನಾಡಿದ  ಕಾರ್ಮಿಕ‌ ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕ ಶ್ರೀನಿವಾಸ್ ರವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಇಲ್ಲವಾಗಿದೆ, ಆದರೆ ಕೊರೋನಾ ದಿಂದಾಗಿ ಬಾಲಕರ್ಮಿಕತೆ ಯ ನೆರಳು ಆಗಾಗ ಕಾಣಿಸುತ್ತಿದೆ, ಈ ಕುರಿತು ಸಾಮಾಜಿಕ ಜಾಗೃತಿ ಅಗತ್ಯ ಎಂದರು.ಪುತ್ತೂರು ವೃತ್ತದ ಹಿರಿಯ‌ ಕಾರ್ಮಿಕ‌ ನಿರ್ದೇಶಕ ಗಣಪತಿ ಹೆಗ್ಡೆ ಮಾರ್ಗದರ್ಶನ ನೀಡಿದರು.ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಸಂಸಾರ ಜೋಡುಮಾರ್ಗ ಕಲಾ ತಂಡದ ಕಲಾವಿದರು  ಜನಜಾಗೃತಿ ಬೀದಿ ನಾಟಕ ವನ್ನು ಪ್ರದರ್ಶಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು