ಪುತ್ತೂರು: ದ.ಕ.ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ ಜಿಲ್ಲೆಯಾದ್ಯಂತ ನಡೆದ ಬಾಲಕಾರ್ಮಿಕ ಪದ್ಧತಿ ಕುರಿತ ಜನಜಾಗೃತಿ ಬೀದಿನಾಟಕ ಜಾಥಾ ಪುತ್ತೂರಿನಲ್ಲಿ ಸಮಾಪನಗೊಂಡಿತು.
ಇಲ್ಲಿನ ಪಡೀಲು ಕನಕದಾಸ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮ ವನ್ನು ಇಲ್ಲಿನ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬಾಬು ಹಾಗೂ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಹರೀಶ್ ತಮ್ಕಿ ಬಾರಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭ ಸಮಾರೋಪದ ಮಾತುಗಳನ್ನಾಡಿದ ಕಾರ್ಮಿಕ ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕ ಶ್ರೀನಿವಾಸ್ ರವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಇಲ್ಲವಾಗಿದೆ, ಆದರೆ ಕೊರೋನಾ ದಿಂದಾಗಿ ಬಾಲಕರ್ಮಿಕತೆ ಯ ನೆರಳು ಆಗಾಗ ಕಾಣಿಸುತ್ತಿದೆ, ಈ ಕುರಿತು ಸಾಮಾಜಿಕ ಜಾಗೃತಿ ಅಗತ್ಯ ಎಂದರು.ಪುತ್ತೂರು ವೃತ್ತದ ಹಿರಿಯ ಕಾರ್ಮಿಕ ನಿರ್ದೇಶಕ ಗಣಪತಿ ಹೆಗ್ಡೆ ಮಾರ್ಗದರ್ಶನ ನೀಡಿದರು.ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಸಂಸಾರ ಜೋಡುಮಾರ್ಗ ಕಲಾ ತಂಡದ ಕಲಾವಿದರು ಜನಜಾಗೃತಿ ಬೀದಿ ನಾಟಕ ವನ್ನು ಪ್ರದರ್ಶಿಸಿದರು.