ಮಂಗಳೂರು: ಕಾರು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ 13 ದಿನ ಕಳೆದ ನಂತ್ರ, ಮಿದುಳು ನಿಷ್ಕ್ರೀಯಗೊಂಡ ಕಾರಣ, ಸಾವನ್ನಪ್ಪಿದ ಪತ್ನಿಯ ಅಂಗಾಂಗ ದಾನವನ್ನು ಮಾಡುವ ಮೂಲಕ, ಪತಿ ಸಾವಿನ್ನಲೂ ಸಾರ್ಥಕತೆಯನ್ನು ಮರೆದಿರೋ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಳ್ಳಾಲ್ ಭಾಗ್ ನಲ್ಲಿ ಪ್ರೀತಿ ಎಂಬ ಮಹಿಳೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಂತ ಸಂದರ್ಭದಲ್ಲಿ, ಏಪ್ರಿಲ್ 9ರಂದು ಬಿಎಂಡಬ್ಲ್ಯೂ ಕಾರು ಚಾಲಕ ಶ್ರವಣ್ ಕುಮಾರ್ ಕುಡಿದ ಕಾರು ಚಲಾಯಿಸಿ, ಈಕೆಯ ಬೈಕ್ ಗೆ ಡಿಕ್ಕಿ ಹೊಡಿದ್ದನು. ಈ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಂತ ಪ್ರೀತಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದ್ರೇ.. ಪ್ರೀತಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂಬುದಾಗಿ ಪತಿ ಮನೋಜ್ ವೈದ್ಯರು ತಿಳಿಸಿದ್ದರು. ಜೊತೆಗೆ ಆಕೆಯ ಅಂಗಾಂಗ ದಾನಕ್ಕೂ ಮನವೊಲಿಕೆ ಮಾಡಿದ್ದರು. ಈ ಪರಿಣಾಮ, ಪತ್ನಿಯ ಸಾವಿನನ್ನೂ ಆಕೆಯ ಲಿವರ್ ಅನ್ನು ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಗೆ, ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.