ಮಂಗಳೂರು : ಪ್ರಕೃತಿ ವಿಕೋಪದಿಂದ ದೋಣಿ ಮುಳುಗಡೆಯಾಗಿ ಮೃತರಾದ ಮೀನುಗಾರರ ಕುಟುಂಬದವರಿಗೆ 6 ಲಕ್ಷ ಪರಿಹಾರ ನೀಡಲಾಗುವುದು ಎಂದು ಮೀನುಗಾರಿಕೆ, ಬಂದರು ಮುತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿ ಸಚಿವರು, ಮೀನುಗಾರರಿಗಾಗಿ ಕೇಂದ್ರ, ರಾಜ್ಯಗಳಿಂದ 12 ಯೋಜನೆ, ಜಿಲ್ಲಾ ಪಂಚಾಯತ್ಯಿಂದ 4 ಯೋಜನೆ ಜಾರಿಯಲ್ಲಿವೆ. ವಿವಿಧ ಯೋಜನೆ ಮೂಲಕ ಸರ್ಕಾರ ಮೀನುಗಾರರ ಅಭಿವೃದ್ಧಿಗೊಳಿಸಲಾಗುತ್ತಿದೆ.
ಸಂಕಷ್ಟ ಪರಿಹಾರ ನಿಧಿಯಿಂದ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಅವರ ಸಮಸ್ಯೆಗಳಿಗೆ ಪರಿಹಾರ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕ್ ಖಾತೆ ಸಮಸ್ಯೆ, ತಾಂತ್ರಿಕ ತೊಂದರೆ ಯಾಗಿರುವುದರಿಂದ 1200 ಮೀನುಗಾರರ ಸಾಲ ಮನ್ನಾ ಬಾಕಿ ಇವೆ. ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಅಭಿವೃದ್ಧಿಗೆ 12.99 ಕೋಟಿ ರೂ.
ಬಿಜೆಪಿಯ ಎಸ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿ ಸಚಿವರು, ರಾಜ್ಯದ ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಬಂದರಿನಲ್ಲಿ ದೋಣಿಗಳಿಗೆ ಲಂಗರು ಹಾಕುವುದು. ಮೀನುಗಾರಿಕೆ ಬಂದರಿನ ಅಭಿವೃದ್ಧಿಗಾಗಿ 2021-22ರ ಅಗಸ್ಟ್ವರೆಗೆ 12.99 ಕೋಟಿ ರೂ. ನೀಡಲಾಗಿದೆ. ಕರ್ನಾಟಕ ಮತ್ಸ್ಯ ವಿಕಾಸ ಯೋಜನೆಯಡಿ ತಾಂತ್ರಿಕತೆಯನ್ನು ಅಳವಡಿಸಲು ಹೊಸ ಯೋಜನೆಯನ್ನು ಕೈಬಿಡಲಾಗಿದೆ. ಇದನ್ನು ಜಾರಿ ಮಾಡುವ ಕುರಿತು ಸಿಎಂ ಗಮನಕ್ಕೆ ತರಲಾಗುವುದು ಎಂದರು.