News Karnataka Kannada
Sunday, April 28 2024
ಮಂಗಳೂರು

ಜೀವನ, ಸಂಪತ್ತು ಎಲ್ಲಾ ಕ್ಷಣಿಕವಾಗಿದ್ದು ಐಸ್‌ಕ್ರೀಂ ನಂತೆ ಕರಗಿ ಹೋಗುತ್ತದೆ : ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು

Dharma
Photo Credit :

ಬೆಳ್ತಂಗಡಿ: ದೇವರು, ಗುರುಗಳು ಮತ್ತು ಶಾಸ್ತçದಲ್ಲಿ ದೃಢ ನಂಬಿಕೆ ಇಟ್ಟು ಮನ, ವಚನ, ಕಾಯದಿಂದ ತ್ರಿಕರಣ ಪೂರ್ವಕವಾಗಿ ದಾನ, ಧರ್ಮ ಮತ್ತು ಸೇವೆಯ ಸತ್ಕಾರ್ಯ ಮಾಡಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು. ಜಪ, ತಪ, ಧ್ಯಾನ, ಸ್ವಾಧ್ಯಾಯದ ಮೂಲಕ ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆಯನ್ನು ಕಳೆದಾಗ ಮೋಕ್ಷ ಪ್ರಾಪ್ತಿಯಾಗಿ ಆತ್ಮನೇ ಪರಮಾತ್ಮನಾಗುತ್ತಾನೆ ಎಂದು ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಹೇಳಿದರು.

ಅವರು ಶುಕ್ರವಾರ ನಾರಾವಿಯಲ್ಲಿ ಧರ್ಮನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಧರ್ಮಶ್ರೀ ಸಭಾಭವನದಲ್ಲಿ ಮಂಗಲ ಪ್ರವಚನ ನೀಡಿದರು.

ಲೌಕಿಕ ಆಸೆ, ಆಕಾಂಕ್ಷೆಗಳನ್ನು ದೂರ ಮಾಡಿ, ಸತತ ಧರ್ಮದ ಅನುಷ್ಠಾನದೊಂದಿಗೆ ಜೀವನ ಪಾವನ ಮಾಡಿಕೊಳ್ಳಬೇಕು. ಜೀವನ, ಸಂಪತ್ತು ಎಲ್ಲಾ ಕ್ಷಣಿಕವಾಗಿದ್ದು ಐಸ್‌ಕ್ರೀಂ ನಂತೆ ಕರಗಿ ಹೋಗುತ್ತದೆ. ಯೌವನದಲ್ಲೆ ದಾನ, ಧರ್ಮಾದಿ ಸತ್ಕಾರ್ಯಗಳನ್ನು ಪರಿಶುದ್ಧ ಮನಸ್ಸಿನಿಂದ ಮಾಡಿ ಪುಣ್ಯ ಸಂಚಯದೊAದಿಗೆ ಮೋಕ್ಷ ಪ್ರಾಪ್ತಿಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪೂಜ್ಯ ಅಮರಕೀರ್ತಿ ಮುನಿಮಹಾರಾಜರು ಮಂಗಲ ಪ್ರವಚನ ನೀಡಿ, ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಹಾಗೂ ಆತ್ಮಕಲ್ಯಾಣಕ್ಕಾಗಿ ಧರ್ಮದ ಅವಶ್ಯಕತೆ ಇದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಿAದ ಎಷ್ಟೇ ಸುಖ, ಸೌಲಭ್ಯ, ಸವಲತ್ತುಗಳು ದೊರಕಿದರೂ ಎಲ್ಲವೂ ತಾತ್ಕಾಲಿಕ ಹಾಗೂ ಕ್ಷಣಿಕ ಎಷ್ಟೇ ಸುಖ, ಸಂಪತ್ತು ಇದ್ದರೂ ಮಾನಸಿಕ ನೆಮ್ಮದಿ ಇರುವುದಿಲ್ಲ.

ಪ್ರತಿ ಕ್ಷೇತ್ರದಲ್ಲಿಯೂ ಇಂದು ಜ್ಞಾನದ ಅವಶ್ಯಕತೆ ಇದ್ದು, ಧರ್ಮಮಾರ್ಗದಲ್ಲಿ ನಡೆದು ಆತ್ಮಕಲ್ಯಾಣದೊಂದಿಗೆ ಶಾಶ್ವತ ಸುಖ-ಶಾಂತಿ, ನೆಮ್ಮದಿ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಎನ್. ಪ್ರೇಮ್ ಕುಮಾರ್ ಹೊಸ್ಮಾರು, ವಿಜಯ ಕುಮಾರ್ ನೂರಾಳಬೆಟ್ಟು, ಮೂಡಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ನಾರಾವಿ, ನಿರಂಜನ ಅಜ್ರಿ, ಶಿಶುಪಾಲ ಜೈನ್, ಪ್ರಕಾಶ್ ಜೈನ್, ಅಶೋಕ ಕುಮಾರ್ ವರಿಮಾರು, ಅರುಣಾ ಪ್ರಕಾಶ್, ಹರ್ಷೇಂದ್ರ ಜೈನ್, ಅಜಿತ, ಮುನಿರಾಜ ಜೈನ್, ಶಶಿಕಾಂತ ಜೈನ್, ರಾಜೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು