News Karnataka Kannada
Monday, April 29 2024
ಮಂಗಳೂರು

ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ “ಆರ್ಟಿಸನ್” ಕಾರ್ಡ್ ವಿತರಣಾ ಕಾರ್ಯಕ್ರಮ

New Project (23)
Photo Credit :
ಮಂಗಳೂರು : ಶುಕ್ರವಾರ ನಗರದಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ “ಆರ್ಟಿಸನ್” ಐಡೆಂಟಿಟಿ ಕಾರ್ಡ್ ವಿತರಣಾ ಕಾರ್ಯಕ್ರಮವು ದೈವಜ್ಞ ಬ್ರಾಹ್ಮಣ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ ಹಾಗೂ ಭಾರತ ಸರಕಾರದ ವಸ್ತ್ರ ಮಂತ್ರಾಲಯದ ಹ್ಯಾಂಡಿಕ್ರಾಫ್ಟ್ ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆಯಾದ ಶ್ರೀಮತಿ ಹೇಮಲತಾ ಸತೀಶ ಶೇಟ್ ಅವರು ಕಾರ್ಯಕ್ರಮವನ್ನು ದೀಪ‌ ಉದ್ಘಾಟಿಸಿ ಮಾತನಾಡಿದ ಅವರು ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ ಈ ಆರ್ಟಿಸನ್ ಕಾರ್ಡ್ ಮೂಲಕ ತಾವೂ ಓರ್ವ ಚಿನ್ನ-ಬೆಳ್ಳಿ ಕಲೆಗಾರರು ಎಂಬ ಮಾನ್ಯತೆ ದೊರಕಿದ್ದು ಮುಂದೆ ಕೇಂದ್ರ ಸರಕಾರದಿಂದ ಬರುವ ಯಾವುದೇ ಹೊಸ ಸ್ಕೀಂನ ಲಾಭವನ್ನು ಪಡೆಯಲು ಈ ಕಾರ್ಡ್ ಸಹಕಾರಿಯಾಗುವುದು ಎಂದು ತಿಳಿಸಿದರು.ನೂರಕ್ಕೂ ಹೆಚ್ಚು ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ “ಆರ್ಟಿಸನ್” ಕಾರ್ಡುಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಲತಾ ಸತೀಶ ಶೇಟ್  ಹಾಗೂ ಸ್ಥಳೀಯ ಕಾರ್ಪೋರೆಟರುಗಳಾದ ಶ್ರೀಮತಿ ಜಯಲಕ್ಷ್ಮೀ ಹಾಗೂ ಶ್ರೀ ಗಣೇಶ ಕುಲಾಲ್ ಅವರನ್ನು ಹಾಗೂ ಹ್ಯಾಂಡಿಕ್ರಾಫ್ಟ್ ಪ್ರಮೋಷನ್ ಆಫೀಸರ್ ಆದ ಶ್ರೀ ಅಫ್ಲಾಹ್ ಹಸನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
BIS ಹಾಲ್ಮಾರ್ಕ್ ಕಡ್ಡಾಯದ ಬಳಿಕ ಸಣ್ಣ ಸ್ವರ್ಣೋದ್ಯಮಿಗಳು ಹಾಗೂ ಚಿನ್ನ-ಬೆಳ್ಳಿ ಕುಶಲಕರ್ಮಿಗಳ ಪರವಾಗಿ ಧ್ವನಿಯೆತ್ತಿ ಸಂಸದರು, ಹಾಗೂ ಜನಪ್ರತಿನಿಧಿಗಳ ಮುಖೇನ ತಮ್ಮ ಅಳಲನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ ಯಶಸ್ವಿಯಾದ ದೈವಜ್ಞ ಬ್ರಾಹ್ಮಣ ಚಿನ್ನ-ಬೆಳ್ಳಿ ಕೆಲಸಗಾರರ ಸಂಘ, ಮಂಗಳೂರಿನ ಅಧ್ಯಕ್ಷರಾದ ಶ್ರೀ ಶ್ರೀಪಾದ ಬಿ. ರಾಯ್ಕರ್ ಹಾಗೂ ಕಾರ್ಯದರ್ಶಿ ಶ್ರೀ ರವಿ ಗೋಕರ್ಣಕರ್ ಅವರನ್ನು ದೈವಜ್ಞ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ್ ಶೇಟ್, ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಅಶೋಕ ಶೇಟ್, ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ ಶೇಟ್ ಎಕ್ಕೂರು ಹಾಗೂ ದೈವಜ್ಞ ಮಹಿಳಾ ಮಂಡಳಿಯ ಶ್ರೀಮತಿ ಪುಷ್ಪಾ ಕೃಷ್ಣಾನಂದ ಶೇಟ್ ಅವರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು