ಮಂಗಳೂರು: ದೈವ ದೇವಸ್ಥಾನ ಹಾಗೂ ಮಸೀದಿಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮೆರೆದ ಆರೋಪಿಯ ಭಾವಚಿತ್ರ ಹಾಕಿ ಬಜರಂಗದಳದ ಶಾಖೆ ಯವರಿಂದ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ.
ಮಂಗಳೂರು ಹೊರವಲಯದ ಬೀರಿ ಜಂಕ್ಷನ್ ನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ.
ಅದೇ ರೀತಿ ದೇವದಾಸ್ ದೇಸಾಯಿ ಹೆಸರನ್ನು ಡೇವಿಡ್ ದೇಸಾಯಿ ಎಂದು ಬ್ಯಾನರ್ ನಲ್ಲಿ ಬಜರಂಗದಳದವರು ಬರೆಸಿದ್ದಾರೆ. ಮಂಗಳೂರು ನಗರದ ಸುಮಾರು 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ ಆರೋಪಿ ದೇವದಾಸ್ ಕ್ರಿಶ್ಚಿಯನ್ ಧರ್ಮದ ಅನುಯಾಯಿ ಆಗಿದ್ದರು ಎಂದು ತಿಳಿದುಬಂದಿದೆ.