News Karnataka Kannada
Sunday, May 05 2024
ಮಂಗಳೂರು

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

Southadka
Photo Credit : News Kannada

ಬೆಳ್ತಂಗಡಿ : ‌ಜಗತ್ತಿನಲ್ಲಿ ಸನಾತನ ಧರ್ಮವನ್ನು ಜೀವಂತಗೊಳಿಸಬೇಕಾದರೆ ನಾವು ಪರಿವರ್ತನೆಗೊಳ್ಳುವುದು ಅವಶ್ಯ. ನಮ್ಮ ಕರ್ಮಫಲದ ನೆಲೆಯಲ್ಲಿ ಕಷ್ಟಕಾರ್ಪಣ್ಯ ನಮ್ಮನ್ನು ಬಾಧಿಸುತ್ತದೆ. ಅದಕ್ಕಾಗಿ ಸನ್ಮಾರ್ಗದ ಜೀವನ ನಡೆಸಬೇಕು ಎಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಸೌತಡ್ಕ ಶ್ರೀ ಮಹಾಗಣತಿ ಕ್ಷೇತ್ರದಲ್ಲಿ ಫೆ.4 ರಂದು ಜರಗಿದ 108 ಕಾಯಿ ಗಣಹೋಮ ಮತ್ತು ಮೂಡಪ್ಪ ಸೇವೆ ಪ್ರಯುಕ್ತ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಗಣಪತಿಯನ್ನು ಆರಾಧಿಸುವ ಮನಸ್ಸಿಗೆ ಮುದನೀಡಿ ತನ್ನ ಪ್ರಭೆಯನ್ನು ಬೆಳಗಿಸಿ ಸದ್ಭಾವನೆ ನೀಡುವ ಸಾನಿಧ್ಯ ಸೌತಡ್ಕ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಜಗತ್ತಿನಲ್ಲಿ ತುಂಬಿರುವ ಅಜ್ಞಾನ ಅಂದಕಾರವನ್ನು ಸರಿಸಿ ಸುಜ್ಞಾನವನ್ನು ಕರುಣಿಸುವವ ಗಣಪ. ಸಮಾಜದಲ್ಲಿ ಇಂದು ಒಗ್ಗಟ್ಟಿನ ಕೊರತೆ ಬಹಳಷ್ಟಿದೆ. ಹರಿನಾಮ ಕೀರ್ತನೆಯನ್ನು ಮನೆ ಮನ ಮುಟ್ಟುವ ಕಾರ್ಯ ಧಾರ್ಮಿಕ ಕ್ಷೇತ್ರಗಳಿಂದಾಗಬೇಕಿದೆ. ಇಂದು ದೇವಸ್ಥಾನದ ಪಾವಿತ್ರ್ಯವನ್ನು ತಿಳಿಸುವ ಕಾರ್ಯವಾಗಬೇಕಿದೆ.

ನಾವು ಬದುಕಿ ಬಾಳುವಂತ ದೇಶದಲ್ಲಿ ಪ್ರಾಕೃತಿಕವಾಗಿರುವಂತಹ ರಮಣೀಯ ಬದಲಾವನೆಯಂತೆ ನಮ್ಮ ಜೀವನವು ಕಷ್ಟ ಸುಖಗಳಿಂದ ಸಮ್ಮಿಳಿತವಾಗಿದೆ. ಕಲಿಯುಗದಲ್ಲಿ ಕರುಣಾಮಯಿ ಭಗವಂತ ಎಲ್ಲರಿಗೂ ಅನುಗ್ರಹಿಸುವ. ದೇವಸ್ಥಾನದ ಒಳಗೆ ಸದೃಢ ಮನೋಭಾವದಿಂದ ಭಗವಂತನಲ್ಲಿ ತಲ್ಲೀನಗೊಂಡು ದೇಶಕ್ಕೋಸ್ಕರ, ಸಮಾಜಕ್ಕೋಸ್ಕರ ಪ್ರಾರ್ಥಿಸಿದಾಗ ಸಾನಿಧ್ಯ ಪುಷ್ಟಿಯಾಗಿ ದಿವ್ಯಚೇತನ ಪ್ರಾಪ್ತಿಯಾಗುತ್ತದೆ. ಯಾಂತ್ರಿಕ ಬಧುಕಿನ ಸೋಗಿನಲ್ಲಿ ಎಲ್ಲವನ್ನು ಇತಿಮಿತಿಯಲ್ಲಿ ಬಳಸುವುದು ಇಂದಿನ ಅವಶ್ಯವಾಗಿದೆ.

ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡುತ್ತಾ, ಸುಮಾರು ಮೂರು ೩ ಕೋಟಿ ರೂ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಈ ಆಲಯಕ್ಕೆ ಬರುವ ರಸ್ತೆಯನ್ನು ಅಗಲೀಕರಿಸಿ ಸುಂದರವಾದ ರಸ್ತೆಯನ್ನು ಲೋಕಾರ್ಪಣೆ ಮಾಡುವ ಕೆಲಸವು ಆಗಿರುವುದು ನನ್ನ ಸೌಭಾಗ್ಯ. ವ್ಯವಸ್ಥಾಪನಾ ಸಮಿತಿಯವರ ಅನೇಕ ಕನಸುಗಳಿಗೆ ಸರಕಾರದಿಂದ ಸಿಗಬೇಕಾದ ವ್ಯವಸ್ಥಗಳಿಗೆ ಸಹಕರಿಸುವುದಾಗಿ ನುಡಿದರು.

ರಾಜ್ಯ ಧಾರ್ಮಿಕ ಪರಷತ್ ಸದಸ್ಯರಾದ ಕಷೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಪ್ರವಚನ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಹರೀಶ್ ರಾವ್ ಪ್ರಸ್ತಾವಿಸಿ, ಸ್ವಾಗತಿಸಿದರು. ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಡಾ.ಮೋಹನ್ ದಾಸ್ ಕೆ., ಉಪಸ್ಥಿತರಿದ್ದರು. ಉಪನ್ಯಾಸಕ ವಿಶ್ವನಾಥ ರೈ.ಪಿ., ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು