ಮಂಗಳೂರು: ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ನಾಟಕ ಬ್ಯಾಂಕಿನ ದೇಶದ ಎಲ್ಲಾ ಪ್ರಾಂತೀಯ ಕಚೇರಿಗಳಿಗೆ ವಾಹನ ಸೇವೆ ಒದಗಿಸುವ ಬಗ್ಗೆ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರಿನ ಖ್ಯಾತ ಸಂಸ್ಥೆಯಾದ ಜನನಿ ಟೂರ್ಸ್ ಆ್ಯಂಡ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದವಾಗಿದೆ. ಮಂಗಳೂರಿನಲ್ಲಿರುವ ಕರ್ನಾಟಕ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಜ.25ರಂದು ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಮಹಾಬಲೇಶ್ವರ ಭಟ್ ಮತ್ತು ಜನನಿ ಟೂರ್ಸ್ ಆ್ಯಂಡ್ ರೆಸಾರ್ಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಕೋಟ್ಯಾನ್ ಈ ಒಡಂಬಡಿಕೆಗೆ ಸಹಿ ಹಾಕಿದರು. ಈ ವೇಳೆ ಕರ್ನಾಟಕ ಬ್ಯಾಂಕಿನ ಮಹಾ ವ್ಯವಸ್ಥಾಪಕರಾದ ಮುರಳೀಧರ ಕೆ. ರಾವ್ ಹಾಗೂ ಉಪ ಮಹಾ ವ್ಯವಸ್ಥಾಪಕರಾದ ಜಗದೀಶ್ ಕೆ. ಆರ್. ಉಪಸ್ಥಿತರಿದ್ದರು. ಈ ಒಪ್ಪಂದದ ಪ್ರಕಾರ ದೇಶದಲ್ಲಿರುವ ಕರ್ನಾಟಕ ಬ್ಯಾಂಕಿನ ಎಲ್ಲಾ ಪ್ರಾಂತೀಯ ಕಚೇರಿಗಳಿಗೆ ಜನನಿ ಸಂಸ್ಥೆ ವಾಹನ ಸೇವೆ ಒದಗಿಸಲಿದೆ.
ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಮತ್ತು ಜನನಿ ಟೂರ್ಸ್ ಆ್ಯಂಡ್ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ವಾಹನ ಸೇವೆ ಒಪ್ಪಂದ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.