News Karnataka Kannada
Saturday, April 27 2024
ಮಂಗಳೂರು

ಉಜ್ವಲ ಗ್ಯಾಸ್ ಮಂಜೂರಾಗಿ ಒಂದು ವರ್ಷ ಸಂದರೂ 23 ಕುಟುಂಬಗಳಿಗೆ ಸಂಪರ್ಕ ಮರೀಚಿಕೆ

Untitled 2
Photo Credit :

ಬೆಳ್ತಂಗಡಿ: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಉಜ್ವಲ ಗ್ಯಾಸ್ ಲಾಯಿಲ ಗ್ರಾಮದ 23 ಕುಟುಂಬಗಳಿಗೆ ಮಂಜೂರಾಗಿ‌ ವರ್ಷ ಸಂದರೂ ಇನ್ನೂ ಕೂಡ ಸೌಲಭ್ಯದ ವಿತರಣೆ ಆಗಿಲ್ಲ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಸಂಬಂಧ ಬೆಸ್ಟ್ ಫೌಂಡೇಶನ್ ಲಾಯಿಲ ಘಟಕದ ಪದಾಧಿಕಾರಿಗಳು ಮೇ.31 ರಂದು ಪುತ್ತೂರು ಸಹಾಯಕ ಆಯುಕ್ತರ ಸಮ್ಮುಖ ತಹಶಿಲ್ದಾರ್ ಮಹೇಶ್ ಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಒಂದು ವಾರದೊಳಗೆ ಈ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಆಗದಿದ್ದರೆ ಸಂಘಟನೆಯ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ಇತರ ಗ್ರಾಮಗಳಲ್ಲಿರುವ ಇದೇ ರೀತಿಯ ವಂಚಿತ ಫಲಾನುಭವಿಗಳ‌ನ್ನು ಜೊತೆ ಸೇರಿಸಿ ಪ್ರತಿಭಟನೆಯ ಹಾದಿಹಿಡಿಯುವುದಾಗಿ ತಿಳಿಸಲಾಗಿದೆ.

ಫಲಾನುಭವಿಗಳಾದ ದೇಜಮ್ಮ, ಗೀತಾ, ಜಾನಕಿ,ಕುಸುಮಾ, ಲೀಲಾವತಿ, ಲೀಲಾವತಿ ಸೋಮನಾಥ, ಮೆಗ್ಡಲೆನ್ ಮಿರಾಂದಾ, ಮಾರ್ಗರೆಟ್ ಅನಿತಾ, ನಳಿನಾಕ್ಷಿ, ನಳಿನಿ, ಓಣೆದಿ, ಪ್ರೀತಿಕಾ, ಪ್ರೇಮಲತಾ, ರತ್ನಾವತಿ, ರುಕ್ಮಿಣಿ, ಶಾಜಿದಾ ಭಾನು, ಶೀಲಾ ಪಿಂಟೋ, ಸೂಕ್ಷ್ಮಾ, ಸ್ಟೆಲ್ಲಾ ಡಿಸೋಜಾ, ಸ್ಟೆಲ್ಲಾ ಪಿಂಟೋ, ಸುಲೋಚನಾ, ಸೂಕ್ಷ್ಮಾ, ಸುಂದರಿ, ವಸಂತಿ ಮತ್ತು ಝುಲೈಕಾ ಎಂಬವರೇ ಇದೀಗ ಇಂದು ವರ್ಷದಿಂದ ಸರಕಾರದ ಸೌಲಭ್ಯಕ್ಕಾಗಿ ಕಾಯುತ್ತಿರುವವರು. ಲಭ್ಯ ಮಾಹಿತಿ ಪ್ರಕಾರ ಇವರಿಗೆ ಸೌಲಭ್ಯ ಮಂಜೂರಾದ ಬಗ್ಗೆ ಫಲಾನುಭವಿಗಳಿಗೆ ಇದುವರೆಗೆ ಮಾಹಿತಿ ಕೂಡ ನೀಡಲಾಗಿಲ್ಲ. ಅಲ್ಲದೆ, ಮುಂದಕ್ಕೆ ದೊಡ್ಡ ಸಮಾವೇಶ ನಡೆಸಿ ಆ ವೇಳೆ ನಿಮ್ಮನ್ನು ಕರೆಯುತ್ತೇವೆ. ಅಲ್ಲೇ ನಿಮಗೆ ದೊರೆಯಕಲಿದೆ ಎಂದು ಕೆಲವರು ಹಿಂದೆ ಸಮಾಧಾನಪಡಿಸಿದ್ದಾರೆ ಎಂದೂ ಆಪಾದಿಸಲಾಗಿದೆ.

ಒಟ್ಟಾರೆ ಈ ಫಲಾನುಭವಿಗಳಿಗೆ ಬೆಸ್ಟ್ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದ್ದು ನ್ಯಾಯದೊರಕಿಸಿಕೊಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಮಂಗಳವಾರ ಮನವಿ ನೀಡುವ ವೇಳೆ ಬೆಸ್ಟ್ ಫೌಂಡೇಶನ್ ತಾಲೂಕು ಸಲಹೆಗಾರ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಲಾಯಿಲ ಘಟಕದ ಪ್ರಮುಖರಾದ ಮಧುಸೂಧನ್, ಸಲೀಂ ಆದರ್ಶನಗರ, ಉಮರ್ ಲಾಯಿಲ, ಸುರೇಶ್ ಪುತ್ರಬೈಲು, ದೇವರಾಜ್ ಪಡ್ಲಾಡಿ ಮೊದಲಾದವರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು