News Karnataka Kannada
Monday, April 29 2024
ಮಂಗಳೂರು

ಕೇಂದ್ರದ ಡೀಸೆಲ್ ಸಬ್ಸಿಡಿ ರದ್ದು, ಖಾಸಗಿ ಪೆಟ್ರೋಲ್‌ ಬಂಕ್‌ನತ್ತ ಕೆಎಸ್ಆರ್ ಟಿಸಿ!

2nd PUC annual exam: KSRTC arranges free travel
Photo Credit :

ಸುಳ್ಯ: ಕೆಎಸ್ಆರ್ ಟಿಸಿ ಬಸ್‌ಗಳಿಗೆ ತುಂಬಿಸಲು ಸಂಸ್ಥೆಯ ಡಿಪೋಗೆ ಸರಬರಾಜು ಆಗುತ್ತಿದ್ದ ಡೀಸೆಲ್‌ ಇಂಧನದ ಸಬ್ಸಿಡಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಡೀಸೆಲ್‌ ಬೆಲೆ ಗಗನಕ್ಕೇರಿದ ಕಾರಣ ಕೆಎಸ್ಆರ್ ಟಿಸಿಯು ತನ್ನ ಬಸ್‌ಗಳಿಗೆ ಡಿಸೇಲ್‌ ತುಂಬಿಸಲು ಖಾಸಗಿ ಪೆಟ್ರೋಲ್‌ ಬಂಕ್‌ಗಳನ್ನು ಆಶ್ರಯಿಸಲಾರಂಭಿಸಿದೆ.

ಸುಳ್ಯ ಕೆಎಸ್ಆರ್ ಟಿಸಿಯವರು ಗುರುವಾರ ಸಂಜೆಯಿಂದ ಬಸ್‌ ನಿಲ್ದಾಣದ ಬಳಿಯ ಖಾಸಗಿ ಬಂಕ್‌ನಲ್ಲಿ ಡೀಸೆಲ್‌ ತುಂಬಿಸುತ್ತಿರುವುದು ಕಂಡುಬಂದಿದೆ.

ಕಾರಣ ಏನು?
ಕೇಂದ್ರ ಸರಕಾರದಿಂದ ಸಬ್ಸಿಡಿ ಇರುವಾಗ ಲೀಟರ್‌ಗೆ 65ರಿಂದ 70 ರೂ. ವರೆಗೆ ಕೆಎಸ್ಆರ್ ಟಿಸಿಗೆ ಡೀಸೆಲ್‌ ದೊರೆಯುತ್ತಿತ್ತು. ಇದೀಗ ಸಬ್ಸಿಡಿ ರದ್ದಾಗಿರುವುದರಿಂದ ಲೀಟರ್‌ಗೆ 107 ರೂ. ಆಗುತ್ತದೆ ಎಂದು ತಿಳಿದುಬಂದಿದೆ.

ಖಾಸಗಿ ಪೆಟ್ರೋಲ್‌ ಬಂಕ್‌ಗಳಲ್ಲಿ 94 ರೂ.ಗಳಿಗೆ ಒಂದು ಲೀಟರ್‌ ಡೀಸೆಲ್‌ ದೊರೆಯುತ್ತದೆ. ಆ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ಅವರು ಖಾಸಗಿ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಮಂಗಳೂರು ವಿಭಾಗ ವಾಪ್ತಿಗೆ ಬರುವ ಮಂಗಳೂರಿನ 3 ಹಾಗೂ ಕುಂದಾಪುರ, ಉಡುಪಿ ಡಿಪೋಗೆ ದಿನವೊಂದಕ್ಕೆ ಸುಮಾರು 50,000 ಲೀಟರ್‌ ಡೀಸೆಲ್‌ ಇದೆ ಆವಶ್ಯಕತೆ ಇದೆ ಎನ್ನಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣವನ್ನು ಖಾಸಗಿ ಬಂಕ್‌ಗಳಿಂದ ತುಂಬಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇತರ ರಾಜ್ಯಗಳಲ್ಲೂ ಇದೇ ಸ್ಥಿತಿ
ಕೇರಳ, ತಮಿಳುನಾಡು ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಇದೀಗ ಖಾಸಗಿ ಪೆಟ್ರೋಲ್‌ ಬಂಕ್‌ಗಳನ್ನು ಇಂಧನಕ್ಕಾಗಿ ಆಶ್ರಯಿಸುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು