ಮಂಗಳೂರು: ದರೋಡೆ ಪ್ರಕರಣವೊಂದರ ಆರೋಪಿಯಿಂದ ಹಣ ಸುಲಿಗೆ ಮಾಡಿದ ಗ್ರಾಮ ಪಂಚಾಯತ್ ಸದಸ್ಯನನ್ನ ಪೊಲೀಸರು ಬಂಧಿಸಿದ್ದಾರೆ. ಪಾವೂರು ಗ್ರಾಮ ಪಂಚಾಯತ್ ಸದಸ್ಯ ಪಾವೂರು ಅಕ್ಷರ ನಗರದ ಮಲಾರ್ ಮನೆಯ ಅಬ್ದುಲ್ ಖಾದರ್ ರಿಜ್ವಾನ್ 28 ಬಂಧಿತ ಆರೋಪಿ.
2021 ಡಿಸೆಂಬರ್ ರಲ್ಲಿ ಸುರತ್ಕಲ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಓರ್ವ ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಆರೋಪಿಯನ್ನು ಸಂಪರ್ಕಿಸಿ ಪೋಲಿಸರಿಗೆ ಹಣ ನೀಡಿ ಪ್ರಭಾವ ಬೀರಿ ಕೇಸಿನಿಂದ ಹೆಸರು ತೆಗೆಸುವುದಾಗಿ ಆಮಿಷವೊಡ್ಡಿದ್ದರು. ಅದಕ್ಕಾಗಿ 3ಲಕ್ಷ₹ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಂತ ಹಂತವಾಗಿ 2ಪಾಯಿಂಟ್ ತೊಂಬತ್ತ್ 5ಲಕ್ಷ₹ಪಡೆದುಕೊಂಡಿದ್ದರು . ತನ್ನನ್ನು ಪೊಲೀಸರು ಹುಡುಕುತ್ತಿರುವ ಮಾಹಿತಿ ಪಡೆದ ದರೋಡೆ ಪ್ರಕರಣದ ಆರೋಪಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಅನಂತರ ಈತ ತನ್ನಿಂದ ಹಣ ಪಡೆದವರಲ್ಲಿ ಹಣ ವಾಪಸ್ ನೀಡುವಂತೆ ಕೇಳಿದಾಗ ಹಣ ಪಡೆದವರು ಜೀವ ಬೆದರಿಕೆ ಹಾಕಿದ್ದರು. ಅಲ್ಲದೆ 30,000/- ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಕಳೆದುಕೊಂಡ ವ್ಯಕ್ತಿ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಸಂಬಂಧಿಸಿ ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.