ಬೆಳ್ತಂಗಡಿ : ವೃತ್ತಿಯಲ್ಲಿ ಬೆಳ್ತಂಗಡಿಯಲ್ಲಿ ಜೀವವಿಮಾ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ, ಪ್ರವೃತ್ತಿಯಲ್ಲಿ ಸಮಾಜಸೇವಕನಾಗಿ ಕೆಲಸ ಮಾಡುತ್ತಿರುವ ಅರಸಿನಮಕ್ಕಿ ಸಮೀಪದ ಉದಯಶಂಕರ ಕೆ. ಇವರಿಗೆ ಈ ವರ್ಷದ “ಉಂಡೆಮನೆ” ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಬಾಲ್ಯದಲ್ಲಿ ತಂದೆಯನ್ನು ಕಳಕೊಂಡರೂ ತಾಯಿಯ ರಕ್ಷಣೆ- ಮಾರ್ಗದರ್ಶನಗಳಲ್ಲಿ ಹತ್ತನೆಯ ತರಗತಿಯಲ್ಲಿರುವಾಗಲೇ ರಾ.ಸ್ವ.ಸಂಘದ ಸಂಪರ್ಕದಿಂದ ಸಮಾಜಸೇವೆಗಿಳಿದ ಇವರು ವಿವಿಧ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ, ಸಾಂಸ್ಕೃತಿಕ ಸೇವಾಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ಹಾಗೂ ಜೇಸೀ,ರೋಟರಿ ಮುಂತಾದ ಸಂಘ ಸಂಸ್ಥೆಗಳೊಂದಿಗೆ ತನ್ನನ್ನು ಜೋಡಿಸಿಕೊಂಡು ಭಾಗಿಯಾಗುತ್ತಿದ್ದಾರೆ.
ಪರೋಪಕಾರದ ಮೂಲಕವೇ ವೈಯಕ್ತಿಕ ವರ್ಚಸ್ಸನ್ನು ಪಡಕೊಂಡ ಇವರು ಮೂಲ ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ. ಶ್ರೀರಾಮಚಂದ್ರಾ