News Karnataka Kannada
Sunday, May 12 2024
ಮಂಗಳೂರು

ಅಪಘಾತ ಪ್ರಕರಣ: ಚಾಲಕನ ವಿರುದ್ಧದ ಕೊಲೆ ಪ್ರಕರಣ ತನಿಖೆ ಹಂತದಲ್ಲಿದೆ: ಎನ್ ಶಶಿಕುಮಾರ್

Surathkal: Section 144 imposed around toll gate from today till November 3: Mangaluru Commissioner
Photo Credit : News Kannada

ಮಂಗಳೂರು: ನಗರದ ಬಲ್ಲಾಳ್ ಬಾಗ್ ಬಳಿ ನಡೆದಿದ್ದ ಕಾರು ಚಾಲಕನ ಬೇಜವಾಬ್ದಾರಿ ಚಾಲನೆಯಿಂದಾಗಿ ಮಹಿಳೆ ಸಾವಿಗೆ ಕಾರಣನಾಗಿದ್ದ ಬಿಎಂಡಬ್ಲ್ಯು ಕಾರು ಚಾಲಕ ಶರವಣ್ ಕುಮಾರ್ ಎಂಬಾತನ ವಿರುದ್ಧ ಇದೀಗ ಕೊಲೆ ಪ್ರಕರಣ ದಾಖಲಾಗಿ ತನಿಖೆ ಹಂತದಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ .

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಏಪ್ರಿಲ್ 9ರಂದು ಈ ದುರಂತ ಘಟನೆ ನಡೆದಿದೆ .ಸಾವಿಗೆ ಕಾರಣನಾಗಿದ್ದ ಆರೋಪಿ ವಿರುದ್ಧ ಮೊದಲು ಐಪಿಸಿ 304ಅಂದರೆ ಪ್ರಾಣ ಹಾನಿಯಾಗುವ ಬಗ್ಗೆ ಜ್ಞಾನ ಇದ್ದರೂ ಈ ಕೃತ್ಯ ಮುಂದಾಗುವುದು ಅದರ ಮುಂದುವರಿದ ಭಾಗವಾಗಿ ಐಪಿಸಿ 308ಅಂದರೆ ಕೊಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಶ್ರವಣ್ ಕುಮಾರ್ 8ದಿನ ನ್ಯಾಯಾಂಗ ಬಂಧನದಲ್ಲಿದ್ದನು.

ಚಾಲನೆ ವೇಳೆ ಆರೋಪಿ ಡ್ರಗ್ಸ್ ಮದ್ಯಪಾನ ಮಾಡಿರುವ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು .ಪ್ರೀತಿ ಮನೋಜ್ ಅವರು ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಆದರ್ಶ ಮೆರೆದಿದ್ದಾರೆ ಎಂದು ಕಮಿಷನರ್ ಶ್ಲಾಘಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು