News Karnataka Kannada
Friday, May 17 2024
ಮಂಗಳೂರು

ಅನಧಿಕೃತ ಮಳಿಗೆ ನಿರ್ಮಾಣ ತೆರವು ಆಗ್ರಹಿಸಿ ಬೀಗ ಜಡಿದು ಪ್ರತಿಭಟನೆ

Photo Credit :
ಬಂಟ್ವಾಳ: ಮೆಲ್ಕಾರ್ ನಲ್ಲಿ ಅಂಗಡಿ ಮಳಿಗೆಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದು, ಅದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಲೀಸರು ಪ್ರತಿಭಟನಾಕಾರರಲ್ಲಿ ಬೀಗ ತೆಗೆಯುವಂತೆ ಹೇಳಿದ ಬಳಿಕ ಬೀಗ ತೆರವು ಮಾಡಿ ಪ್ರತಿಭಟನೆ ನಡೆಸಿದರು.
ಮೆಲ್ಕಾರ್ ನಲ್ಲಿ ಅಕ್ರಮ ಅಂಗಡಿಗಳನ್ನು ತೆರವು ಮಾಡುವಂತೆ ಸ್ಥಳೀಯ ರ ದೂರಿನಂತೆ ಎ.ಸಿ‌.ಸ್ಥಳ ಪರಿಶೀಲನೆ ನಡೆಸಿದ್ದರು, ಅಬಳಿಕ ನ್ಯಾಯಾಲಯದ ಆದೇಶದಂತೆ ಅಂಗಡಿಗಳನ್ನು ತೆರವು ಮಾಡುಂತೆ ನೋಟಿಸ್ ಜಾರಿಮಾಡಲಾಗಿತ್ತು.
ಆದರೆ ಪುರಸಭೆ ನೋಟಿಸ್ ಜಾರಿ ಮಾಡಿ ಅಂಗಡಿ ತೆರವು ಮಾಡುವುದಕ್ಕೆ ಮುಂದಾಗಿಲ್ಲ ಎಂದು ಅರೋಪಿಸಿ ಇದಕ್ಕೆ ಪುರಸಭೆಯ ಒಳ ಒಪ್ಪಂದ ಕಾರಣ ಎಂದು ಪ್ರತಿಭಟನೆ ನಿರತರು ಬೀಗಹಾಕಿ ಅಕ್ರೋಶವ್ಯಕ್ತಪಡಿಸಿದರು.
ಸ್ಥಳಕ್ಕೆ ಎ‌.ಸಿ ಬರುವವರಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪುರಸಭೆಯ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.ಬುಡಾ ಸದಸ್ಯ ಸಚಿನ್ ಮೆಲ್ಕಾರ್ ನೇತೃತ್ವದಲ್ಲಿ ಪ್ರಮುಖರಾದ ರೂಪೇಶ್ ಆಚಾರ್ಯ, ಲೋಹಿತ್ ಪಣೋಲಿಬೈಲ್, ಗುರುರಾಜ್ ಬಂಟ್ವಾಳ, ಖಾಲಿದ್ ನಂದಾವರ, ಪ್ರಸನ್ನ ಮೆಲ್ಕಾರ್, ಸುದರ್ಶನ್ ಮೆಲ್ಕಾರ್, ಪ್ರದೀಪ್ ಅಜ್ಜಿಬೆಟ್ಟು,  ಸುರೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು