News Karnataka Kannada
Tuesday, April 30 2024
ಬೆಂಗಳೂರು ನಗರ

ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟು ಪ್ರಶಂಸೆಗೆ ಪಾತ್ರರಾದ ಉತ್ತರ ಪ್ರದೇಶ ಸಿಎಂ ಯೋಗಿ

Yogi
Photo Credit :

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಾವು ಚಲಿಸುತ್ತಿದ್ದ ಕಾರನ್ನು ಬದಿಗೆ ನಿಲ್ಲಿಸಿ, ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟಿದ್ದಾರೆ. ಸಿಎಂ ಅವರ ಮಾನವೀಯತೆ ಜನರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.

ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಟ್ರಾಫಿಕ್ ಡಿಸಿಪಿ ಸುಭಾಷ್ ಚಂದ್ರ ಶಾಕ್ಯ ಅವರು, ಗುರುವಾರ ಹಜರತ್‌ಗಂಜ್‌ನಿಂದ ಬಂದರಿಯಾಬಾಗ್‌ಗೆ ಮುಖ್ಯಮಂತ್ರಿಯವರ ವಾಹನ ತೆರಳುತ್ತಿದ್ದಾಗ ರಾಜಭವನದ ಬಳಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಗುರುವಾರ ಯೋಗಿ ಹಜರತ್‌ಗಂಜ್‌ನಿಂದ ಬಂಡಾರಿಯಾಬಾಗ್‌ಗೆ ತೆರಳುತ್ತಿದ್ದರು.ಅದಕ್ಕೆಂದು ಎಲ್ಲ ವಾಹನಗಳನ್ನು ತಡೆಯಲಾಗಿತ್ತು. ಆದರೆ ನಿಂತಿರುವ ವಾಹನಗಳಲ್ಲಿ ಆಯಂಬುಲೆನ್ಸ್‌ ಕೂಡ ಇರುವುದನ್ನು ಗಮನಿಸಿದ ಯೋಗಿ, ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಹೇಳಿ, ಆಯಂಬುಲೆನ್ಸ್‌ ತೆರಳಿದ ಅನಂತರವೇ ಸಂಚಾರ ಆರಂಭಿಸಿದ್ದಾರೆ. ಅಲ್ಲಿದ್ದ ವಾಹನಗಳ ಮಾಲಕರು ಸಿಎಂ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು