ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಾವು ಚಲಿಸುತ್ತಿದ್ದ ಕಾರನ್ನು ಬದಿಗೆ ನಿಲ್ಲಿಸಿ, ಆಂಬ್ಯುಲೆನ್ಸ್ಗೆ ದಾರಿಮಾಡಿಕೊಟ್ಟಿದ್ದಾರೆ. ಸಿಎಂ ಅವರ ಮಾನವೀಯತೆ ಜನರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಟ್ರಾಫಿಕ್ ಡಿಸಿಪಿ ಸುಭಾಷ್ ಚಂದ್ರ ಶಾಕ್ಯ ಅವರು, ಗುರುವಾರ ಹಜರತ್ಗಂಜ್ನಿಂದ ಬಂದರಿಯಾಬಾಗ್ಗೆ ಮುಖ್ಯಮಂತ್ರಿಯವರ ವಾಹನ ತೆರಳುತ್ತಿದ್ದಾಗ ರಾಜಭವನದ ಬಳಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಗುರುವಾರ ಯೋಗಿ ಹಜರತ್ಗಂಜ್ನಿಂದ ಬಂಡಾರಿಯಾಬಾಗ್ಗೆ ತೆರಳುತ್ತಿದ್ದರು.ಅದಕ್ಕೆಂದು ಎಲ್ಲ ವಾಹನಗಳನ್ನು ತಡೆಯಲಾಗಿತ್ತು. ಆದರೆ ನಿಂತಿರುವ ವಾಹನಗಳಲ್ಲಿ ಆಯಂಬುಲೆನ್ಸ್ ಕೂಡ ಇರುವುದನ್ನು ಗಮನಿಸಿದ ಯೋಗಿ, ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಹೇಳಿ, ಆಯಂಬುಲೆನ್ಸ್ ತೆರಳಿದ ಅನಂತರವೇ ಸಂಚಾರ ಆರಂಭಿಸಿದ್ದಾರೆ. ಅಲ್ಲಿದ್ದ ವಾಹನಗಳ ಮಾಲಕರು ಸಿಎಂ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.