ಬೆಳ್ತಂಗಡಿ: ಗೂಡ್ಸ್ ವಾಹನದಲ್ಲಿ ಮೂರು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ತಡೆದ ಪೊಲೀಸರನ್ನೇ ಯಾಮಾರಿಸಿ ಅವರನ್ನು ಆರೋಪಿಗಳು ದೂಡಿಹಾಕಿ ಪರಾರಿಯಾದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ವಾಮದಪದವು ಕುದ್ಕೋಳಿ ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ಠಾಣಾಧಿಕಾರಿ ಸುತೇಶ್ ಕೆ.ಪಿ ಮತ್ತು ಸಿಬ್ಬಂದಿಗಳು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬೆಳಗ್ಗಿನ ಜಾವಾ ಈ ಘಟನೆ ನಡೆದಿದೆ. ವಾಮದಪದವು ಕಡೆಯಿಂದ ಕುದ್ಕೋಳಿ ಕಡೆಗೆ ವಾಹನವೊಂದರಲ್ಲಿ ಜಾನುವಾರು ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆಂದು ಖಚಿತ. ಮಾಹಿತಿ ಮೇರೆಗೆ ಎಸ್ಐ ಮತ್ತು ಸಿಬ್ಬಂದಿಗಳಾದ ನವೀನ, ಪ್ರಭಾಕರ ಮೋರೆ ಎಂಬವರ ತಂಡ ಪ್ರಕರಣ ಪತ್ತೆಹಚ್ಚಿದೆ.
ಕುಕ್ಕಿಪ್ಪಾಡಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಗೂಡ್ಸ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿರ್ಲ್ಯಕ್ಷಿಸಿ ಮುಂದೆ ಹೋದಾಗ ಬೆನ್ನಟ್ಟಿ ಹೋದ ವೇಳೆ ಎಸ್ಐ ಅವರನ್ನೇ ದೂಡಿಹಾಕಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಅವರಿಂದ ವಶಪಡಿಸಿಕೊಂಡ ಮೂರು ಜಾನುವಾರುಗಳ ಬೆಲೆ 20 ಸಾವಿರವಾದರೆ, ಗೂಡ್ಸ್ ವಾಹನದ ಮೊತ್ತ 6 ಲಕ್ಷ ಹಾಗೂ ಆರೋಪಿಗಳ 30 ಸಾವಿರ ಮೌಲ್ಯದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.