ಕಾಸರಗೋಡು: ಕಳವು ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಮೂವರನ್ನು ಕಾಫಾ ಕಾಯ್ದೆಯಂತೆ, ಮೊಕದ್ದಮೆ ಹೂಡಿ ಬಂಧಿಸಲಾಗಿದೆ. ಹೊಸದುರ್ಗ, ಅಂಬಲತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು, ಸುಲಿಗೆ ಸೇರಿದೆಂತೆ ಹಲವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ.
ಕಾಞ೦ಗಾಡ್ ನ ಆಸಿಫ್(೨೧), ಬಳಾಲ್ ನ ಹರೀಶ್ ಕುಮಾರ್(೪೮) ಮತ್ತು ಎಂ. ಅಶೋಕ್ (೩೩) ಬಂಧಿತರು. ಅಶೋಕ್ ನನ್ನು ತಮಿಳುನಾಡಿನ ಸೇಲಂನಿಂದ ಬಂಧಿಸಲಾಯಿತು.
ಆಸಿಫ್ ವಿರುದ್ಧ ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.