News Karnataka Kannada
Monday, April 29 2024
ಕಾಸರಗೋಡು

ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ: ೪೫ ಅಂಗಡಿಗಳಿಗೆ ನೋಟಿಸ್

Prices of essential commodities rise during festive season: Notices issued to 45 shops
Photo Credit : By Author

ಕಾಸರಗೋಡು:  ಓಣಂ ಸೇರಿದಂತೆ ಇನ್ನಿತರ ಹಬ್ಬದ ಸಂದರ್ಭದಲ್ಲಿ  ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಾಳಸಂತೆ, ಅಕ್ರಮ ದಾಸ್ತಾನು ತಡೆಗಟ್ಟುವ ನಿಟ್ಟಿನಲ್ಲಿ  ಕಂದಾಯ, ಸಾರ್ವಜನಿಕ ಸರಬರಾಜು ಹಾಗೂ ಅಳತೆ ಮಾಪಕ ಇಲಾಖಾ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ  ಸಾರ್ವಜನಿಕ ಮಾರುಕಟ್ಟೆಗೆ ದಾಳಿ ನಡೆಸಿ ತಪಾಸಣೆ ನಡೆಸಿದರು.  ೧೪೦ ರಷ್ಟು ಅಂಗಡಿಗಳಿಗೆ ದಾಳಿ ನಡೆಸಲಾಗಿದ್ದು,  ಅಕ್ರಮ ಕಂಡು ಬಂದ ೪೫ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.

ಉಪ ಜಿಲ್ಲಾಧಿಕಾರಿ  ದಿಲೀಪ್ ರವರ  ನೇತೃತ್ವದಲ್ಲಿ ಕಾಸರಗೋಡು ಮತ್ತು ಮಂಜೇಶ್ವರ  ತಾಲೂಕುಗಳಲ್ಲಿ ತಪಾಸಣೆ ನಡೆಸಲಾಯಿತು. ಎಡಿಎಂ ಕೆ. ನವೀನ್ ಬಾಬು, ಜಿಲ್ಲಾ ಸರಬರಾಜು ಅಧಿಕಾರಿ ಎ ಸಜ್ಜದ್,  ಮಂಜೇಶ್ವರ ತಾಲೂಕು ಸರಬರಾಜು ಅಧಿಕಾರಿ ಕೆ ಪಿ ಸಜಿಮೋನ್, ಪಡಿತರ ನಿರೀಕ್ಷಕ ಪಿ ಸುಧೀರ್ ಮತ್ತು ಕಾನೂನು ಮಾಪನ ನಿರೀಕ್ಷಕ ರಾಬರ್ಟ್ ಫೆರಾ ಭಾಗವಹಿಸಿದ್ದರು.

ವೆಳ್ಳರಿಕುಂಡು  ತಾಲೂಕಿನಲ್ಲಿ  ಉಪ ಜಿಲ್ಲಾಧಿಕಾರಿ  ಸುಫಿಯಾನ್ ಅಹಮ್ಮ ದ್ ಸಾರ್ವಜನಿಕ ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಿದರು. ತಾಲೂಕು ಸರಬರಾಜು ಅಧಿಕಾರಿ ಟಿ.ಸಜೀವನ್, ಪಡಿತರ ನಿರೀಕ್ಷಕರಾದ ಕೆ.ಕೆ.ರಾಜೀವನ್, ಜಾಸ್ಮಿನ್ ಕೆ.ಆಂಟನಿ, ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಾದ ಅಮರನಾಥ್, ಅನೂಪ್ ಜೋಸೆಫ್, ಅಧಿಕಾರಿಗಳಾದ ಎ.ಆರ್.ಪ್ರಸನ್ನನ್, ಸಿ. ಮುಖೇಶ್ ಭಾಗವಹಿಸಿದ್ದರು.

ತಾಲೂಕಿನ ಹೊಜದುರ್ಗದಲ್ಲಿ ಅಪರ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ನೇತೃತ್ವದಲ್ಲಿ ತಾಲೂಕು ಸರಬರಾಜು ಅಧಿಕಾರಿ ಕೆ. ಎನ್.ಬಿಂದು, ಪಡಿತರ ನಿರೀಕ್ಷಕರಾದ ಪಿ.ಕೆ.ಸಶಿಕುಮಾರ್, ಎಂ.ಕೆ.ಸೈಫುದ್ದೀನ್, ಕಾನೂನು ಮಾಪನ ನಿರೀಕ್ಷಕ ಪವಿತ್ರನ್ ಸಾರ್ವಜನಿಕ ಮಾರುಕಟ್ಟೆ ಪರಿಶೀಲನೆ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು