ಕಾಸರಗೋಡು: ಜಿಲ್ಲೆಯ ಉಪನೋಂದಣಾಧಿಕಾರಿ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದು, ಲಂಚ ಪಡೆದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಮತ್ತು ರಾಜಪುರ ಉಪನೋಂದಣಾಧಿಕಾರಿ ಕಚೇರಿಗೆ ದಾಳಿ ನಡೆಸಲಾಗಿದೆ. ಡಿ ವೈ ಎಸ್ಪಿ ಕೆ. ವಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆಸಲಾಗುಸೆ. ತಪಾಸಣೆ ನಡೆಸಿದಾಗ ದಾಖಲೆ ಗಳಿಲ್ಲದ ೧೧, ೩೦೦ ರೂ . ವನ್ನು ವಶಪಡಿಸಿಕೊಳ್ಳಲಾಗಿದೆ.
ಕಚೇರಿ ಸಮಯದ ಬಳಿಕ ಅಕ್ರಮವಾಗಿ ಲಂಚ ಪಡೆದು ನೋಂದಣಿ ಕೆಲಸ ಮಾಡುತ್ತಿರುವುದು ದಾಳಿ ವೇಳೆ ಸ್ಪಷ್ಟಗೊಂಡಿದೆ .
ಕಚೇರಿಗಳಲ್ಲಿ ಹಲವು ಅವ್ಯವಹಾರ ಪತ್ತೆಯಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.