ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಹೊರಾಟ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬೃಹತ್ ಪ್ರತಿಭಟನಾ ರಾಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸೈಫುಲ್ಲ ತಂಶಲ್ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು.
ಕುಂಜತ್ತೂರು ಹಾಗೂ ಉದ್ಯಾವರ 10ನೇ ಮೈಲಿನಲ್ಲಿ ಅಂಡರ್ಪಾಸ್, ಶಿಕ್ಷಣ ಸಂಸ್ಥೆಗಳಿರುವ ಸ್ತಲದಲ್ಲಿ ಫುಟ್ ಓವರ್ ಬ್ರಿಡ್ಜ್, ಸರ್ವೀಸ್ ರಸ್ತೆ ಕಾಮಗಾರಿ ಮೊದಲು ಮುಗಿಸಿ, ಆಟೋರಿಕ್ಷಾ, ಜೀಪ್, ಟ್ಯಾಕ್ಸಿ ನಿಲ್ದಾಣ, ಬಸ್ ವೇಟಿಂಗ್ ಶೆಲ್ಟರ್ ಹಾಗೂ ಫುಟ್ಪಾತ್ ನಿರ್ಮಿಸಬೇಕು. ತೂಮಿನಾಡಿನಿಂದ ಶುರುವಾದ 10ನೇ ಮೈಲಿನಲ್ಲಿ ಕೊನೆಗೊಂಡ ಪ್ರತಿಭಟನಾ ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಪಂಚಾಯಿತಿ ಅಧ್ಯಕ್ಷೆ ಜೀನ್ ಲವೀನಾ ಮೆಂಥೆರೊ, ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ಎಸ್.ಎಂ.ಬಶೀರ್, ಸಂಜೀವ ಶೆಟ್ಟಿ, ದಯಾಕರ ಮಾಡ, ಪಂಚಾಯತ್ ಸದಸ್ಯ ರಾವ ಲಕ್ಷ್ಮಣನ್, ರಹೀಂ, ನಸ್ರತ್ ಜಹಾನ್, ಹೊರಾಟ ಸಮಿತಿ ಪಾದಾದಿ ಕಾಲಿಗಳಾದ ಅಶ್ರಫ್ ಬಡಾಜ, ಜಬ್ಬಾರ್ ಪದವ್, ಹಸೈನಾರ್ ಸೆವೆನ್ಸ್ಟಾರ್, ರಝಾಕ್ ಚಕ್ಕೂರ್, ಅಶ್ರಫ್ ಕುಂಜತ್ತೂರು, ಹನೀಫ್ ಕುಚ್ಚಿಕ್ಕಾಡ್, ಸಂಬಂಧಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧನಿದ್ದೇನೆ ಎಂದು ಶಾಸಕರು ತಿಳಿಸಿದರು.