ಕಾಸರಗೋಡು: ಮಂಜೇಶ್ವರದ ಚಿನ್ನಾಭರಣ ಕಳವು ಮಾಡಿದ್ದ ಬಂಧಿಸಲಾಗಿದೆ. ದೇವಸ್ಥಾನದಲ್ಲಿ ಅರ್ಚಕನನ್ನು ಬಂಧಿತ ಆರೋಪಿಯನ್ನು ದೀಪಕ್ ನಂಬೂದಿರಿ ಎಂದು ಗುರುತಿಸಲಾಗಿದೆ.
ಶ್ರೀ ಮಂಗೇಶ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಗ್ರಹದ ಚಿನ್ನಾಭರಣಗಳನ್ನು ಕದ್ದು ನಕಲಿ ಆಭರಣಗಳನ್ನು ಹಾಕಿದ್ದರು. ವಿಚಾರಿಸಿದಾಗ ಚಿನ್ನಾಭರಣವನ್ನು 84,000. ರೂ.ಗೆ ಮಾರಾಟ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದಾನೆ.
ಅಕ್ಟೋಬರ್ 27 ರಂದು ದೇವಸ್ಥಾನದ ಅರ್ಚಕರಾಗಿ ದೀಪಕ್ ನೇಮಕಗೊಂಡಿದ್ದು, ಅಕ್ಟೋಬರ್ 29 ರಂದು ಮಾರುಕಟ್ಟೆಗೆ ಹೋದ ದೀಪಕ್ ದೇವಸ್ಥಾನಕ್ಕೆ ಹಿಂತಿರುಗಲಿಲ್ಲ ಎಂದು ತಿಳಿದುಬಂದಿದೆ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಆದರೆ ನೂತನ ಅರ್ಚಕ ಶ್ರೀಧರ್ ಭಟ್ ನೇಮಕಗೊಂಡಾಗ ಮಹಾಲಕ್ಷ್ಮಿ ದೇವಿಯ ಆಭರಣ ನಕಲಿಯಾಗಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಧಿಕಾರಿಗಳು ಇದು ದೀಪಕ್ ಕೃತ್ಯ ಎಂದು ಶಂಕಿಸಿದ್ದಾರೆ.