News Karnataka Kannada
Thursday, May 09 2024
ಕಾಸರಗೋಡು

ಕಾಸರಗೋಡು: ದೇವಸ್ಥಾನದಲ್ಲಿ ಚಿನ್ನಾಭರಣ ಕಳವು, ಅರ್ಚಕನ ಬಂಧನ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಲಾರಿ ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಮರಳನ್ನು ಹಾಗೂ ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ‌ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
Photo Credit : Pixabay

ಕಾಸರಗೋಡು: ಮಂಜೇಶ್ವರದ ಚಿನ್ನಾಭರಣ ಕಳವು ಮಾಡಿದ್ದ ಬಂಧಿಸಲಾಗಿದೆ. ದೇವಸ್ಥಾನದಲ್ಲಿ ಅರ್ಚಕನನ್ನು ಬಂಧಿತ ಆರೋಪಿಯನ್ನು ದೀಪಕ್ ನಂಬೂದಿರಿ ಎಂದು ಗುರುತಿಸಲಾಗಿದೆ.

ಶ್ರೀ ಮಂಗೇಶ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಗ್ರಹದ ಚಿನ್ನಾಭರಣಗಳನ್ನು ಕದ್ದು ನಕಲಿ ಆಭರಣಗಳನ್ನು ಹಾಕಿದ್ದರು. ವಿಚಾರಿಸಿದಾಗ ಚಿನ್ನಾಭರಣವನ್ನು 84,000. ರೂ.ಗೆ ಮಾರಾಟ ಮಾಡಿರುವುದಾಗಿ ತಪ್ರೊಪ್ಪಿಕೊಂಡಿದ್ದಾನೆ.

ಅಕ್ಟೋಬರ್ 27 ರಂದು ದೇವಸ್ಥಾನದ ಅರ್ಚಕರಾಗಿ ದೀಪಕ್ ನೇಮಕಗೊಂಡಿದ್ದು, ಅಕ್ಟೋಬರ್ 29 ರಂದು ಮಾರುಕಟ್ಟೆಗೆ ಹೋದ ದೀಪಕ್ ದೇವಸ್ಥಾನಕ್ಕೆ ಹಿಂತಿರುಗಲಿಲ್ಲ ಎಂದು ತಿಳಿದುಬಂದಿದೆ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಆದರೆ ನೂತನ ಅರ್ಚಕ ಶ್ರೀಧರ್ ಭಟ್ ನೇಮಕಗೊಂಡಾಗ ಮಹಾಲಕ್ಷ್ಮಿ ದೇವಿಯ ಆಭರಣ ನಕಲಿಯಾಗಿರುವುದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಧಿಕಾರಿಗಳು ಇದು ದೀಪಕ್‌ ಕೃತ್ಯ ಎಂದು ಶಂಕಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು