ಕಾಸರಗೋಡು : ಎರಡು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಬೇಡಡ್ಕ ನಿವಾಸಿಯ ಮೃತದೇಹ ಶನಿವಾರ ಸಂಜೆ ತಳಂಗರೆ ಬಂದರು ಸಮೀಪ ಪತ್ತೆಯಾಗಿದೆ. ಬೇಡಡ್ಕ ಮುಳ್ಳಕೋಡ್ ನ ಕೆ . ವಿ ಬಾಲಚಂದ್ರ ( ೫೭) ಮೃತಪಟ್ಟವರು.
ಗುರುವಾರ ಮಧ್ಯಾಹ್ನ ಹೊಳೆ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ನಾಗರಿಕರು , ಅಗ್ನಿ ಶಾಮಕದ ದಳದ ಸಿಬಂದಿಗಳು ಶೋಧ ನಡೆಸಿದ್ದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಮೃತದೇಹವನ್ನು ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರ ದಲ್ಲಿರಿಸಲಾಗಿದೆ.