ಕಾಸರಗೋಡು : ಪೆರ್ಲ ಕಾಟುಕುಕ್ಕೆಯಲ್ಲಿ ನಾಪತ್ತೆಯಾಗಿದ್ದ ವೃದ್ಧ ಕೃಷಿಕನ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ. ಕಾಟುಕುಕ್ಕೆ ದೇವಿಮೂಲೆಯ ಥಾಮಸ್ ಕಾಪ್ಪನ್ (೮೮) ಮೃತಪಟ್ಟವರು.
ಶುಕ್ರವಾರ ಮಧ್ಯಾಹ್ನದಿಂದ ಕಾಪ್ಪನ್ ನಾಪತ್ತೆಯಾಗಿದ್ದರು. ಮಧ್ಯಾಹ್ನ ತೋಟಕ್ಕೆ ತೆರಳಿದ್ದರು. ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಮೀಪದ ತೋಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.