ಕಾಸರಗೋಡು: ಬೇಕಲತೃಕ್ಕನ್ನಾಡ್ ತೀರದಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು, ಮೂರು ಕುಟುಂಬ ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಈ ತೀರದ ಹತ್ತಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ.
ಶನಿವಾರ ಮಧ್ಯಾಹ್ನ ಬಳಿಕ ಕಡಲ್ಕೊರೆತ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಇತರ ತೀರ ಗಳಲ್ಲೂ ಕಡಲ್ಕೊರೆತ ಹೆಚ್ಚಾಗಿದೆ. ತೀರದ ಹಲವಾರು ತೆಂಗು ಗಳು ಯಾವುದೇ ಸಂದರ್ಭದಲ್ಲಿ ಸಮುದ್ರ ಪಾಲಾಗುವ ಸ್ಥಿತಿಯಲ್ಲಿದೆ.ಮೂರು ಕುಟುಂಬಗಳ 17 ಮಂದಿಯನ್ನು ಉಡುಮದ ವೃದ್ದ ಸದನ ಕೇಂದ್ರಕ್ಕೆ ಸ್ಥಳಾಂತರಿ ಸ ಲಾಗಿದೆ