ಕಾಸರಗೋಡು: ಕಾರು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಅಬಕಾರಿ ದಳದ ಸಿಬಂದಿ ಓರ್ವರು ಮೃತಪಟ್ಟ ಘಟನೆ ಇಂದು ಸಂಜೆ ಪೆರಿಯದಲ್ಲಿ ನಡೆದಿದೆ.
ಕಾಸರಗೋಡು ಅಬಕಾರಿ ದಳದ ಸಿಬಂದಿ ದಿಪಿನ್ ಕುಮಾರ್ (31) ಮೃತ ಪಟ್ಟವರು. ಆಲಕ್ಕೋಡ್ ನಿವಾಸಿಯಾಗಿದ್ದ ದಿಪಿನ್ ಸಂಜೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಗಂಭೀರ ಗಾಯ ಗೊಂಡ ದಿಪಿನ್ ನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತ ಪಟ್ಟಿದ್ದರು.
ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.