ಕಾಸರಗೋಡು: ಪಿಎಫ್ಐ ಮುಖಂಡರ ಮನೆ, ಕಚೇರಿ ಮೇಲೆ ಎನ್ಐಎ ದಾಳಿ, ಮುಖಂಡರ ಬಂಧನ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಕೇರಳದಲ್ಲಿ ಕರೆ ನೀಡಿರುವ ಹರತಾಳಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಕುಂಬಳೆಯಲ್ಲಿ ಸರಕು ಲಾರಿ ಮೇಲೆ ಇಂದು ಬೆಳಿಗ್ಗೆ ಕಲ್ಲೆಸೆದ ಘಟನೆ ನಡೆದಿದ್ದು. ಉಳಿದಂತೆ ಮೊದಲ ಗಂಟೆಗಳಲ್ಲಿ ಹರತಾಳ ಶಾಂತಿಯುತವಾಗಿ ನಡೆಯುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಸೇರಿದಂತೆ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ. ಖಾಸಗಿ ವಾಹನಗಳು ಎಂದಿನಂತೆ ಸಂಚಾರ ನಡೆಸುತ್ತಿದೆ. ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಹರತಾಳ ನಡೆಯಲಿದೆ. ಪ್ರಮುಖ ಕೇಂದ್ರಗಳಲ್ಲಿ ಹೊಸಂಗಡಿ, ಉಪ್ಪಳ, ಕಾಸರಗೋಡು ಮೊದಲಾದೆಡೆ ಪ್ರತಿ ಭಟನೆ ನಡೆಸಲಾಗುವುದು ಎಂದು ಪಿಎಫ್ಐ ಮುಖಂಡರು ತಿಳಿಸಿದ್ದಾರೆ.