News Karnataka Kannada
Thursday, May 02 2024
ಕಾಸರಗೋಡು

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಗೆ ಸೇರ್ಪಡೆಗೊಳಿಸಲು ಜಿಲ್ಲಾ ಮಟ್ಟದ  ಸೆಲ್ ಸಭೆ

Medical camp to be included in endosulfan victims' list
Photo Credit : By Author

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತ ಪಟ್ಟಿಗೆ ಸೇರ್ಪಡೆಗೊಳಿಸಲು ವೈದ್ಯಕೀಯ ಶಿಬಿರಕ್ಕೆ  ಇದುವರೆಗೆ  ೨೦, ೪೨೭ ಅರ್ಜಿಗಳು ಲಭಿಸಿದೆ.  ಈ ಬಗ್ಗೆ ರವಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಎಂಡೋಸಲ್ಫಾನ್  ಜಿಲ್ಲಾ ಮಟ್ಟದ  ಸೆಲ್ ಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

ಅರ್ಜಿದಾರರ ತಪಾಸಣೆ ನಡೆಸಲು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಅರೋಗ್ಯ ತಪಾಸಣೆಗೆ ಅಡಚಣೆಯಾಗದಂತೆ  ವ್ಯವಸ್ಥೆ ಕಲ್ಪಿಸಲು ಸಚಿವರು ಸೂಚನೆ ನೀಡಿದರು. ಅಗತ್ಯ ತಜ್ಞ ವೈದ್ಯರ ಸೇವೆ ಲಭಿಸಲು ಅರೋಗ್ಯ ಇಲಾಖೆಗೆ ಸೂಚನೆ ನೀಡಿದರು.

ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಶಿಬಿರ ನಡೆಸಲಾಗುವುದು. ಎಣ್ಮಕಜೆ ಗ್ರಾಮ ಪಂಚಾಯತ್ ನ  ಸಾಯಿ ಟ್ರಸ್ಟ್  ನಿರ್ಮಿಸಿದ   ಮನೆಗಳಿಗೆ ಕುಡಿಯುವ ನೀರು ತಲಪಿಸಲು  ಜಲಪ್ರಾಧಿಕಾರಕ್ಕೆ  ಆದೇಶ ನೀಡಿದರು.

ಅರ್ಹ  ಸಂತ್ರಸ್ತರ ನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸಚಿವರು  ಹೇಳಿದರು. ಸುಪ್ರೀಂ ಕೋರ್ಟ್ ಆದೇಶದಂತೆ  ೫, ೨೩೪ ಮಂದಿಗೆ   ಒಟ್ಟು ೨೦೬ . ೩೦ ಕೋಟಿ ರೂ. ಧನಸಹಾಯ ವಿತರಿಸಲಾಗಿದೆ. ೯೨ ಮಂದಿಗೆ  ಮಂದಿಗೆ   ಧನಸಹಾಯ ವಿತರಿಸಲು ಬಾಕಿ ಉಳಿದಿದೆ. ಕೆಲ ತಾಂತ್ರಿಕ ಅಡಚಣೆ ಯಿಂದ ವಿಳಂಬವಾಗಿದೆ ಎಂದು ಹೇಳಿದರು. ಶಾಸಕರಾದ  ಇ. ಚಂದ್ರಶೇಖರನ್, ಎಂ . ರಾಜಗೋಪಾಲ್ , ಸಿ . ಎಚ್ ಕುಂಞ೦ಬು, ಎನ್ . ಎ  ನೆಲ್ಲಿಕುನ್ನು , ಉಪ ಜಿಲ್ಲಾಧಿಕಾರಿ ಎಸ್ . ಶಶಿಧರನ್ ಪಿಳ್ಳೆ , ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಎ. ಕೆ  ರಮೇ೦ದ್ರನ್,  ಉಪ ಜಿಲಾಧಿಕಾರಿ ಸೂಫಿಯಾನ್  ಮುಹಮ್ಮದ್, ಕಂದಾಯಧಿಕಾರಿ ಅತುಲ್ ಎಸ್ .  ನಾಥ್, ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೆನಾ,  ಎ. ಎಸ್ಪಿ  ಪಿ. ಮುಹಮ್ಮದ್ ನದಿಮುದ್ದೀನ್,  ಪಿ .ಪಿ. ಕೆ. ರಾಜು ,  ಇ . ಪಿ ರಾಜ್ ಮೋಹನ್,  ಜಿಲ್ಲಾ ವೈದ್ಯಾಧಿಕಾರಿ  ಡಾ. ಎ . ವಿ ರಾಮದಾಸ್  ಹಾಗೂವ್ ಇನ್ನಿತರ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು