ಕಾಸರಗೋಡು: ಮರದಿಂದ ಬಿದ್ದು ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಮುಂಡ್ಯತ್ತಡ್ಕ ಪಡ್ಲಡ್ಕದಲ್ಲಿ ನಡೆದಿದೆ. ಬಂಬ್ರಾಣ ತಿಲಕ್ ನಗರದ ಮನೋಹರ (೪೦) ಮೃತಪಟ್ಟವರು.
ಪಡ್ಲಡ್ಕದಲ್ಲಿ ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ಮರವನ್ನು ಕಡಿಯುತ್ತಿದ್ದಾಗ ಆಯತಪ್ಪಿ ಕೆಳ ಬಿದ್ದು ಗಂಭೀರ ಗಾಯಗೊಂಡಿದ್ದು, ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.