ಕಾಸರಗೋಡು: ಕೂಲಿ ಕಾರ್ಮಿಕ ನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಮಣಿಯಂಪಾರೆಯಲ್ಲಿ ನಡೆದಿದೆ.
ಮಣಿಯಂಪಾರೆ ಸಂಟನಡ್ಕ ಪ್ರವೀಣ್ ಪೂಜಾರಿ (29) ಮೃತಪಟ್ಟ ವರು. ರವಿವಾರ ಸಂಜೆ ಮನೆಯಿಂದ ಹೊರಗಡೆ ತೆರಳಿದ್ದ ಪ್ರವೀಣ್ ನಾಪತ್ತೆಯಾಗಿದ್ದು, ರಾತ್ರಿಯಾದರೂ ಮನೆಗೆ ಮರಳದೆ ಇದ್ದುದರಿಂದ ಹುಡುಕಾಡಿದಾಗ ಅಲ್ಪ ದೂರದ ಮರದ ರೆಂಬೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬದಿಯಡ್ಕ ಪೊಲೀಸರು ಮಹಜರು ನಡೆಸಿದರು.