ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿದೇಶಿ ಮದ್ಯ ಮತ್ತು ಬಿಯರ್ ನ್ನು ಮಂಜೇಶ್ವರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮಂಜೇಶ್ವರ ಉದ್ಯಾವರ ತೂಮಿನಾಡಿನ ರಕ್ಷಿತ್ ( 30) ಎಂದು ಗುರುತಿಸಲಾಗಿದೆ. ಕಾರಿನಿಂದ 16 ಬಾಕ್ಸ್ ಗಳಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ತಲಪಾಡಿಯಲ್ಲಿ ಶುಕ್ರವಾರ ಬೆಳಿಗ್ಗೆ ವಾಹನ ತಪಾಸಣೆ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಬಂದ ಕಾರನ್ನು ನಿಲ್ಲಿಸಲು ಪೊಲೀಸರು ಸೂಚನೆ ನೀಡಿದಾಗ ನಿಲ್ಲಿಸದೆ ಪರಾರಿಯಾಗಿದ್ದು, ಸಂಶಯಗೊಂಡ ಪೊಲೀಸರು ಬೆನ್ನಟ್ಟಿ ಉಪ್ಪಳ ಬಳಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ತಪಾಸಣೆ ನಡೆಸಿದಾಗ ಕಾರಿನಲ್ಲಿ ಏಳು ಬಾಕ್ಸ್ ಗಳಲ್ಲಿ ಬಿಯರ್ ಮತ್ತು 9 ಬಾಕ್ಸ್ ಗಳಲ್ಲಿ ಮದ್ಯ ಪತ್ತೆಯಾಗಿದೆ.