ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಿಗೆ ಕಣ್ಣೂರು ವಲಯ ಡಿಐಜಿ ವಿಮಲಾದಿತ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಜೇಶ್ವರಕ್ಕೆ ಹೆಚ್ಚುವರಿಯಾಗಿ ೨೦ ಪೊಲೀಸ್ ಹಾಗೂ ಎರಡು ಫ್ಲೆಯಿಂಗ್ ಸ್ಕ್ಯಾಡ್ ಜೀಪುಗಳನ್ನೂ ಮಂಜೂರು ಗೊಳಿಸಲಾಗಿದೆ. ಆಗಾಗ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿರುವ ಮೀಯಪದವು,ಮೊರತ್ತನೆ,ಪೈವಳಿಕೆ ಮೊದಲಾದ ಸ್ಥಳಗಳಿಗೆ ಡಿಐಜಿ ಭೇಟಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೆನಾ, ಡಿವೈಎಸ್ಪಿಪಿ.ಕೆ ಸುಧಾಕರನ್ ಜೊತೆಗಿದ್ದರು. ಹೊಸದಾಗಿ ಒದಗಿಸಿದ ಜೀಪಿನಲ್ಲಿ ಎಎಸ್ಐ ಸೇರಿದಂತೆ ಐವರು ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. ಉಪ್ಪಳಕ್ಕೆ ಒಂದು ಫ್ಲೆಯಿಂಗ್ ಸ್ಕ್ಯಾಡ್ ಜೀಪು ಒದಗಿಸಲು ಶಿಫಾರಸು ಮಾಡಲಾಗಿದೆ.
ಕುಂಜತ್ತೂರು, ಮಾಡ, ವಾಮಂಜೂರು, ತಲಪ್ಪಾಡಿ, ಪೈವಳಿಕೆ, ಬಾಯಾರ್, ಮುಳಿಗದ್ದೆ, ಮೊರತ್ತನೆ ಮೊದಲಡೆಗಳಲ್ಲಿ ಹಗಲು-ರಾತ್ರಿ ತಪಾಸಣೆ ನಡೆಸಲಾಗುವುದು.
ಕರ್ನಾಟಕದಲ್ಲಿ ಚುನಾವಣೆ ಹಿನ್ನಲೆಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಪೈವಳಿಕೆಯಲ್ಲಿ ಐವರು ಪೊಲೀಸರನ್ನು ಖಾಯಂ ಆಗಿ ನೇಮಿಸಲಾಗುವುದು.ರಾತ್ರಿ ಸಮಯಗಳಲ್ಲಿ ವಾಹನ ತಪಾಸಣೆ ನಡೆಸಲಾಗುವುದು. ರಾತ್ರಿ ೧೧ ಗಂಟೆ ಬಳಿಕ ಬೈಕ್ ಸವಾರರ ಮೇಲೆ ನಿಗಾ ಇರಿಸಲಾಗುವುದು.