ಕಾಸರಗೋಡು: ಎರಡು ಮನೆಗಳಿಗೆ ನುಗ್ಗಿದ ಕಳ್ಳರು 33 ಪವನ್ ಚಿನ್ನಾಭರಣ ಹಾಗೂ 33 ಸಾವಿರ ರೂ. ನಗದು ಕಳವುಗೈದ ಘಟನೆ ಕುಂಬಳೆ ನಾಯ್ಕಾಪು ಎಂಬಲ್ಲಿ ನಡೆದಿದೆ.
ನೀರ್ಚಾಲ್ ನ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ನಾಯ್ಕಾಪಿನ ವಾಸುದೇವ ಅಣ್ಣಯ್ಯ ರವರ ಮನೆಯ ಹಿಂಬದಿಯ ಕಿಟಿಕಿ ಸರಳು ಮುರಿದು ಒಳ ನುಗ್ಗಿರುವ ಕಳ್ಳರು ಎರಡು ಕಪಾಟನ್ನು ಮುರಿದು 30 ಪವನ್ ಚಿನ್ನಾಭರಣ ಮತ್ತು 11 ಸಾವಿರ ರೂ.ಕಳವು ಮಾಡಿದ್ದಾರೆ.
ಸಮೀಪದ ಮೋಹನ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು, ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕಪಾಟಿ ನಲ್ಲಿ ರಿಸಲಾಗಿದ್ದ ಮೂರು ಪವನ್ ಚಿನ್ನಾಭರಣ ಹಾಗೂ 22 ಸಾವಿರ ರೂ. ನಗದು ಕಳವು ಮಾಡಲಾಗಿದೆ. ವಾಸುದೇವ ರವರು ಬೆಳಿಗ್ಗೆ ಬ್ಯಾಂಕ್ ಗೆ ಹಾಗೂ ಪತ್ನಿ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆಸಲಾಗಿದೆ.
ಮೋಹನ್ ದಾಸ್ ಹಾಗೂ ಪತ್ನಿ ಶ್ರೀಲತಾ ಕುಂಬಳೆಯ ಟೈಲರಿಂಗ್ ಮಳಿಗೆಗೆ ತೆರಳಿದ್ದರು ವಾಸುದೇವ ರವರು ಸಂಜೆ ಮನೆಗೆ ಬಂದಾಗ ಕಪಾಟಿನಲ್ಲಿರಿಸಲಾಗಿದ್ದ ವಸ್ತ್ರಗಳು ಚೆಲ್ಲಾಪಿಲ್ಲಿಯಾಗಿದ್ದವು. ಗಮನಿಸಿದಾಗ ಹಿಂಬದಿಯ ಕಿಟಿಕಿ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಎರಡು ಕಪಾ ಟಿ ನಲ್ಲಿರಿಸ ಲಾ ಗಿದ್ದ ಚಿನ್ನಾಭರಣ ಮತ್ತು ನಗದು ಕಳ ವಾಗಿತ್ತು. ರಾತ್ರಿ ಮೋಹನ್ ದಾಸ್ ಮತ್ತು ಪತ್ನಿ ಮನೆಗೆ ಮರಳಿ ಬಂದಾಗ ಮುಂಭಾಗಿಲಿನ ಬೀಗ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದು, ಬೆರಳಚ್ಚು ತಜ್ಞರು, ಶ್ವಾನ ದಳ ಮಾಹಿತಿ ಕಲೆ ಹಾಕಿದೆ.