News Karnataka Kannada
Thursday, May 02 2024
ಕಾಸರಗೋಡು

ಕಾಸರಗೋಡು: ಎರಡು ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ ಕಳ್ಳರು

Kasargod: Burglars break into two houses, steal gold ornaments, cash
Photo Credit : News Kannada

ಕಾಸರಗೋಡು: ಎರಡು ಮನೆಗಳಿಗೆ ನುಗ್ಗಿದ ಕಳ್ಳರು 33 ಪವನ್ ಚಿನ್ನಾಭರಣ ಹಾಗೂ 33 ಸಾವಿರ ರೂ. ನಗದು ಕಳವುಗೈದ ಘಟನೆ ಕುಂಬಳೆ ನಾಯ್ಕಾಪು ಎಂಬಲ್ಲಿ ನಡೆದಿದೆ.

ನೀರ್ಚಾಲ್ ನ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ನಾಯ್ಕಾಪಿನ ವಾಸುದೇವ ಅಣ್ಣಯ್ಯ ರವರ ಮನೆಯ ಹಿಂಬದಿಯ ಕಿಟಿಕಿ ಸರಳು ಮುರಿದು ಒಳ ನುಗ್ಗಿರುವ ಕಳ್ಳರು ಎರಡು ಕಪಾಟನ್ನು ಮುರಿದು 30 ಪವನ್ ಚಿನ್ನಾಭರಣ ಮತ್ತು 11 ಸಾವಿರ ರೂ.ಕಳವು ಮಾಡಿದ್ದಾರೆ.

ಸಮೀಪದ ಮೋಹನ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು, ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಕಪಾಟಿ ನಲ್ಲಿ ರಿಸಲಾಗಿದ್ದ ಮೂರು ಪವನ್ ಚಿನ್ನಾಭರಣ ಹಾಗೂ 22 ಸಾವಿರ ರೂ. ನಗದು ಕಳವು ಮಾಡಲಾಗಿದೆ. ವಾಸುದೇವ ರವರು ಬೆಳಿಗ್ಗೆ ಬ್ಯಾಂಕ್ ಗೆ ಹಾಗೂ ಪತ್ನಿ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆಸಲಾಗಿದೆ.

ಮೋಹನ್ ದಾಸ್ ಹಾಗೂ ಪತ್ನಿ ಶ್ರೀಲತಾ ಕುಂಬಳೆಯ ಟೈಲರಿಂಗ್ ಮಳಿಗೆಗೆ ತೆರಳಿದ್ದರು ವಾಸುದೇವ ರವರು ಸಂಜೆ ಮನೆಗೆ ಬಂದಾಗ ಕಪಾಟಿನಲ್ಲಿರಿಸಲಾಗಿದ್ದ ವಸ್ತ್ರಗಳು ಚೆಲ್ಲಾಪಿಲ್ಲಿಯಾಗಿದ್ದವು. ಗಮನಿಸಿದಾಗ ಹಿಂಬದಿಯ ಕಿಟಿಕಿ ಮುರಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಎರಡು ಕಪಾ ಟಿ ನಲ್ಲಿರಿಸ ಲಾ ಗಿದ್ದ ಚಿನ್ನಾಭರಣ ಮತ್ತು ನಗದು ಕಳ ವಾಗಿತ್ತು. ರಾತ್ರಿ ಮೋಹನ್ ದಾಸ್ ಮತ್ತು ಪತ್ನಿ ಮನೆಗೆ ಮರಳಿ ಬಂದಾಗ ಮುಂಭಾಗಿಲಿನ ಬೀಗ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದು, ಬೆರಳಚ್ಚು ತಜ್ಞರು, ಶ್ವಾನ ದಳ ಮಾಹಿತಿ ಕಲೆ ಹಾಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು