ಕಾಸರಗೋಡು: ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಜೈಲಿನಿಂದ ಪರಾರಿಯಾಗಿ ಬಳಿಕ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ವೆಸ್ಟ್ಎಲೇರಿ ಎಂಬಲ್ಲಿ ನಡೆದಿದೆ.
ವೆಸ್ಟ್ಎಲೇರಿ ಒಲಯಂಬಾಡಿಯ ವಿ.ಜೆ ಜೇಮ್ಸ್ (58) ಮೃತ ಪಟ್ಟವರು.
2002ರ ಸೆ.30 ರಂದು ತನ್ನ ಪುತ್ರಿ ಜೈಸಾ (12) ಎಂಬಾಕೆಯನ್ನು ಆಮಿಷ ತೋರಿಸಿ ಕರೆದೊಯ್ದು ಕೊಲೆ ಗೈದು ಮನೆ ಸಮೀಪದ ಕಾಡಿಗೆ ಮೃತ ದೇಹವನ್ನು ಎಸೆದಿದ್ದರು.
ಈ ಬಗ್ಗೆ ತನಿಖೆ ನಡೆಸಿದ್ದ ವೆಳ್ಳರಿಕುಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2004 ರ ಮಾರ್ಚ್ 20 ರಂದು ಕಾಸರಗೋಡು ಸೆಶನ್ಸ್ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಚಿಮೇನಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಜೇಮ್ಸ್ ಗುರುವಾರ ತಪ್ಪಿಸಿಕೊಂಡಿದ್ದನು. ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಂತೆ ಒಲಯಂಬಾಡಿಯಲ್ಲಿರುವ ಸಹೋದರಿಯ ಮನೆ ಹಿತ್ತಿಲಿನಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವೆಳ್ಳ ರಿಕುಂಡು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು