ಕಾಸರಗೋಡು: ಮಂಜೇಶ್ವರ ತಾಲೂಕಿನ ಅಂಗಡಿಗಳಿಗೆ ದಾಳಿ ನಡೆಸಿದ ಉಪ ಜಿಲ್ಲಾಧಿಕಾರಿ ಸಿರೋಜ್ ಪಿ. ಜೋನ್ ನೇತೃತ್ವದ ತಂಡವು ತಪಾಸಣೆ ನಡೆಸಿತು. ದಿನಸಿ, ತರಕಾರಿ, ಹಣ್ಣು ಹಂಪಲು, ಮಾಂಸದಂಗಡಿ ಅಲ್ಲದೆ ಮೀನು ಮಾರುಕಟ್ಟೆ ಮೊದಲಾದೆಡೆಗಳಲ್ಲಿ ತಪಾಸಣೆ ನಡೆಸಿತು. ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಮಾಂಸ ದಂಗಡಿಗಳಲ್ಲಿ ಬೆಲೆ ಹಾಗೂ ದಿನಾಂಕವನ್ನು ಪ್ರದರ್ಶಿಸಬೇಕು ಎಂದು ಆದೇಶ ನೀಡಿದ್ದಾರೆ.
ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಎ. ಸಾಜದ್, ತಾಲೂಕು ಸಫ್ಲೈ ಅಧಿಕಾರಿ ಕೆ. ಪಿ ಸಜಿ ಮೋನ್, ರೇಶನಿಂಗ್ ಇನ್ಸ್ ಫೆಕ್ಟರ್ ಎನ್. ಸುರೇಶ್ ನಾಯ್ಕ್, ಲೀಗಲ್ ಮೆಟ್ರೋಲಜಿ ಸಹಾಯಕ ಇನ್ಸ್ ಪೆಕ್ಟರ್ ರೋಬರ್ಟ್ ಪೆರಾ, ತಾಲೂಕು ಕಚೇರಿ ಸಿಬ್ಬಂದಿಗಳಾದ ವಿ. ಬಿ ರಾಜೀವ್, ಪಿ.ಬಿ ಅನ್ವರ್, ನಳಿನಾಕ್ಷ ಮೊದಲಾದವರು ಉಪಸ್ಥಿತರಿದ್ದರು.