ಕಾಸರಗೋಡು: ತನ್ನ ಮೆಚ್ಚಿನ ಬ್ರ್ಯಾಂಡ್ನ ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ನಗರದ ಐ ಸಿ ಭಂಡಾರಿ ರಸ್ತೆಯಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ತಿರುವನಂತಪುರದ ಅರಿಮಾನ ನಿವಾಸಿ ಸಜಿಲ್ ಪಾಲೆಸ್ ಅಲಿಯಾಸ್ ಉನ್ನಿ (34) ಎಂಬಾತ ಟವರ್ ಏರಿ ತಲೆನೋವು ತಂದ ವ್ಯಕ್ತಿ.
ಉನ್ನಿ ಮದ್ಯ ಖರೀದಿಸಲು ಪಾನೀಯ ನಿಗಮದ ಚಿಲ್ಲರೆ ಮದ್ಯದ ಅಂಗಡಿಗೆ ಬಂದಿದ್ದರು. ಆದರೆ, ಅವರು ಬಯಸಿದ ಮದ್ಯ ಸಿಗಲಿಲ್ಲ. ಹೀಗಾಗಿ ಸಮೀಪದ ಗೋದಾಮಿನ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಮೇಲೆ ಹತ್ತಿ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಆದರೆ ಉನ್ನಿ ಅವರ ಮಾತು ಕೇಳಲಿಲ್ಲ. ನಂತರ ಗುಂಪಿನಲ್ಲಿದ್ದ ಒಬ್ಬರು ಕೆಳಗೆ ಇಳಿದು ಬಂದರೆ ಉತ್ತಮ ಬ್ರಾಂಡ್ ಮದ್ಯವನ್ನು ಖರೀದಿಸಿ ನೀಡುವುದಾಗಿ ಭರವಸೆ ನೀಡಿದರು. ಆಗ ಉಣ್ಣಿ ನಗುತ್ತಾ ಗೋಪುರದಿಂದ ಕೆಳಗಿಳಿದ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.