News Karnataka Kannada
Sunday, April 28 2024
ಕಾಸರಗೋಡು

ಚಿಬಿದ್ರೆ: ಕಂದಕಕ್ಕೆ ಉರುಳಿದ ರಿಕ್ಷಾ, ಕೂದಲೆಳೆಯ ಅಂತರದಲ್ಲಿ ತಪ್ಪಿದ ಅನಾಹುತ

Chibidre: Rickshaw falls into gorge, averted within a narrow distance
Photo Credit : By Author

ಚಿಬಿದ್ರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಿಬಿದ್ರೆ ಗ್ರಾಮದ ಕಾಪು ಚಡಾವು ಎಂಬಲ್ಲಿ ರಸ್ತೆಯಿಂದ ಮೃತ್ಯುಂಜಯ ನದಿಬದಿಯ ಕಂದಕಕ್ಕೆ ರಿಕ್ಷಾ ಉರುಳಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಉಜಿರೆ ಕಡೆಯಿಂದ ಶಿವಮೊಗ್ಗದತ್ತ ಸಾಗುತ್ತಿದ್ದ ಆಟೋರಿಕ್ಷಾ ಕಾಪು ಎಂಬಲ್ಲಿ ಸಾಗುತ್ತಿದ್ದಾಗ ಮುಂದಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಹಾಗೂ ನದಿ ಮಧ್ಯದ ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಸಮಯ ನದಿಯಿಂದ ಸುಮಾರು ಒಂದು ಮೀ. ಅಂತರದಲ್ಲಿ ರಿಕ್ಷಾ ಮರ ಒಂದಕ್ಕೆ ಸಿಲುಕಿಕೊಂಡ ಕಾರಣ ಸಂಭವನೀಯ ದುರಂತ ತಪ್ಪಿದೆ.

ನದಿಯು ಈ ಭಾಗದಲ್ಲಿ ಸುಮಾರು 10 ರಿಂದ 12 ಅಡಿಯಷ್ಟು ಆಳವಿದೆ. ಶಿವಮೊಗ್ಗ ಮೂಲದ ಗಾಯಾಳುಗಳಾದ ಶಾರದಮ್ಮ, ಭಾರತೀಯಮ್ಮ,ಗೀತಾ ಹಾಗೂ ರಮೇಶ್ ಎಂಬವರನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಟೋರಿಕ್ಷಾ ಉರುಳಿದ ಕಂದಕ ಪ್ರದೇಶದಲ್ಲಿ ಸಾಕಷ್ಟು ತ್ಯಾಜ್ಯ ತಂದು ಹಾಕಲಾಗಿದ್ದು, ಪರಿಸರದಲ್ಲಿ ಹರಡಿರುವ ದುರ್ವಾಸನೆ ಹಾಗೂ ತ್ಯಾಜ್ಯಗಳ ರಾಶಿ ನಡುವೆ ಗಾಯಾಳು ಪ್ರಯಾಣಿಕರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲಕ್ಕೆತ್ತಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು