ಮಂಗಳೂರು, ಅ. 17: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ತನ್ಮಯ್ ಮತ್ತು ಚಿರತೇಜ್ ಇವರು ವಿಜ್ಞಾನ ವಸ್ತು ಪ್ರದರ್ಶನ, ಆದ್ಯಾ ಸುಲೋಚನಾ ವಿಜ್ಞಾನ ಪತ್ರ ವಾಚನ ಹಾಗೂ ಪ್ರದ್ಯುಮ್ನಇವರು ಆಶು ಭಾಷಣದಲ್ಲಿ ವಿದ್ಯಾ ಭಾರತಿ ಕರ್ನಾಟಕ ಆಯೋಜಿಸಿರುವ ಜ್ಞಾನ-ವಿಜ್ಞಾನ ಮೇಳದಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ರಾಜ್ಯ ಮಟ್ಟದಿಂದ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕ್ಷೇತ್ರಿಯ ಮಟ್ಟದ ಸ್ಫರ್ಧೆಯು ಹೈದ್ರಾಭಾದ್ನ ಶಾರದಾಂಭ ಬಂಡಳಗುಡ್ಡ ಜಾಗೀರ್ ಶಾಲೆಯಲ್ಲಿ ನಡೆದಿದ್ದುಇದರಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಮಧ್ಯಪ್ರದೇಶದ ಭೋಪಾಲ್ನ ಸರಸ್ವತಿ ವಿದ್ಯಾಮಂದಿರದಲ್ಲಿ ನವೆಂಬರ್ 03 ರಿಂದ 06 ರತನಕ ನಡೆಯುವರಾಷ್ಟ್ರಮಟ್ಟದ ಸ್ಫರ್ದೆಗೆಆಯ್ಕೆಯಾಗಿರುತ್ತಾರೆ.
ದ.ಕ. ಜಿಲ್ಲೆಯಕೃಷಿಯಾದಅಡಿಕೆಯನ್ನುರಕ್ಷಣೆ ಮಾಡುವ “ Golden Arecanut” ಮಾದರಿಯು ವಸ್ತು ಪ್ರದರ್ಶನದಲ್ಲಿ ಆಯ್ಕೆಯಾಗಿರುತ್ತದೆ. ಇವರನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಯ್ಕ್, ಆಡಳಿತಾಧಿಕಾರಿ ಕೆ.ಸಿ.ನಾಯ್ಕ್, ಪ್ರಧಾನ ಸಲಹೆಗಾರ ರಮೇಶ್.ಕೆ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ ಅಭಿನಂದಿಸಿರುತ್ತಾರೆ.