ಕಾಸರಗೋಡು: ಸುಮಾರು ಒಂದೂವರೆ ದಶಕದ ಹಿಂದಿನ ತಿಮಿಂಗಲದ ಅಸ್ತಿಪಂಜರವು ಮಂಜೇಶ್ವರ ಸಮೀಪದ ಮನೆ ಯೊಂದರ ಶೆಡ್ ನಲ್ಲಿ ಪತ್ತೆಯಾಗಿದೆ. ಮಂಜೇಶ್ವರ ಕಣ್ವತೀರ್ಥದ ಕರ್ನಾಟಕ ಮೂಲದ ವ್ಯಕ್ತಿಯೋರ್ವರ ಮಾಲಕತ್ವದ ಸುಮಾರು ೧೫ ಎಕರೆಯಷ್ಟು ಸ್ಥಳವೊಂದರ ಶೆಡ್ ನಿಂದ ಕಾಸರಗೋಡು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಮಾಲಕನನ್ನು ಸಂಪರ್ಕಿಸಿದಾಗ ೨೦೦೭ ರಲ್ಲಿ ಕಣ್ವತೀರ್ಥ ಕಡಲ ಕೆನಾರೆಯಲ್ಲಿ ತಿಮಿಂಗಲದ ಅಸ್ತಿ ಪಂಜರ ದಾಸ್ತಾನಿಸಿರಿಸಿದ್ದಾಗಿ ಇದಕ್ಕಾಗಿ ೨೭ ಸಾವಿರ ರೂ. ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದಾಗಿ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಸ್ಥಿಪಂಜರವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಸ್ತಿ ಪಂಜರದ ಅವಶೇಷಗಳನ್ನು ಡಿ.ಎನ್.ಎ ಪರೀಕ್ಷೆಗೊಳಪಡಿಸಲಾಗುವುದು ಎಂದು ಅರಣ್ಯ ವಲಯಾಧಿಕಾರಿ ಸೋಳಮನ್ ಕೆ. ಜೋರ್ಜ್ ತಿಳಿಸಿದ್ದಾರೆ. ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.