ಮಂಜೇಶ್ವರ : ಹದಿನೇಳರ ಹರೆಯದ ಬಾಲಕಿಯೋರ್ವಳು ನಿಗೂಢ ವಾಗಿ ನಾಪತ್ತೆಯಾದ ಘಟನೆ ಉಪ್ಪಳದಲ್ಲಿ ನಡೆದಿದೆ . ಉಪ್ಪಳ ಹಿದಾಯತ್ ಬಜಾರ್ ನಲ್ಲಿ ವಾಸವಾಗಿರುವ ಶಿವಮೊಗ್ಗ ಮೂಲದ ಸಾನಿಯಾ ನಾಪತ್ತೆಯಾದವಳು .ಮಂಗಳವಾರ ಬೆಳಿಗ್ಗೆ ಹಾಲು ತರಲೆಂದು ಅಂಗಡಿಗೆ ತೆರಳಿದ್ದ ಸಾನಿಯಾ ಮನೆಗೆ ಮರಳದೆ ನಾಪತ್ತೆಯಾಗಿದ್ದು , ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ . ಬಳಿಕ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಸಮೀಪದ ಸಿಸಿಟಿವಿ ದ್ರಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು , ಹಲವೆಡೆ ಶೋಧ ಆರಂಭಿಸಿದ್ದಾರೆ.ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ , ಮಂಜೇಶ್ವರ ಠಾಣಾಧಿಕಾರಿ ಎ . ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ .