News Karnataka Kannada
Wednesday, May 01 2024
ಕಾಸರಗೋಡು

ಸಿಡಿಲು  ಬಡಿದು ಕಗ್ಗಲ್ಲು ಕೋರೆಯಲ್ಲಿ   ಉಂಟಾದ ಸ್ಪೋಟದಲ್ಲಿ ಓರ್ವ ಕಾರ್ಮಿಕ ಮೃತ

Death Body 08082021
Photo Credit :

ಕಾಸರಗೋಡು : ಸಿಡಿಲು  ಬಡಿದು ಕಗ್ಗಲ್ಲು ಕೋರೆಯಲ್ಲಿ   ಉಂಟಾದ ಸ್ಪೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು , ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ವೆಳ್ಳರಿಕುಂಡು ತಾಲೂಕಿನ  ತಾಯನ್ನೂರು ಕೋಳಿಯಾರು ಎಂಬಲ್ಲಿ ನಡೆದಿದೆ.

ರಮೇಶ್ ( 45) ಮೃತಪಟ್ಟವರು.  ಪ್ರಭಾಕರ ಮತ್ತು ಸುಮಾ  ಗಂಭೀರ ಗಾಯಗೊಂಡಿದ್ದಾರೆ. ಮೂವರು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ  ನಡೆದಿದೆ.

ಸಂಜೆ  ನಾಲ್ಕು ಗಂಟೆ ಸುಮಾರಿಗೆ  ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು , ಈ ಸಂದರ್ಭದಲ್ಲಿ ಕೋರೆಗೆ ಸಿಡಿಲು ಬಡಿದಿದ್ದು , ಅಲ್ಲಿದ್ದ ಸ್ಪೋಟಕ ಸಿಡಿದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಗಂಭೀರ ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ರಮೇಶ್ ಮೃತಪಟ್ಟರು. ಅಂಬಲತ್ತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು