ಕಾಸರಗೋಡು : ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಟಿ . ಕೆ ಪೂಕೋಯ ತಂಘಳ್ ಬುಧವಾರ ಮಧ್ಯಾಹ್ನ ಹೊಸದುರ್ಗ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಈತ ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದು , ಕಳೆದ ನವಂಬರ್ ನಿಂದ ತಲೆ ಮರೆಸಿಕೊಂಡಿದ್ದನು .
ಒಂಭತ್ತು ತಿಂಗಳ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದಾನೆ .
ಪೊಲೀಸರು ಈತನಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು. ಪ್ರಕರಣದ ಇನ್ನೋರ್ವ ಆರೋಪಿ ಯಾಗಿರುವ ಪೂಕೋಯ ತಂಘಳ್ ನ ಪುತ್ರ ಹಾಶಿಂ ಇನ್ನೂ ತಲೆಮರೆಸಿಕೊಂಡಿದ್ದಾನೆ .
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಂಜೇಶ್ವರ ಮಾಜಿ ಶಾಸಕ ಎಂ . ಸಿ ಕಮರುದ್ದೀನ್ ನನ್ನು ಈ ಹಿಂದೆ ಬಂಧಿಸಲಾಗಿತ್ತು . ಕಮರುದ್ದೀನ್ ೯೩
ದಿನಗಳ ಜೈಲು ವಾಸದ ಬಳಿಕ ಜಾಮೀನಿ ನಲ್ಲಿ ಬಿಡುಗಡೆ ಗೊಂಡಿದ್ದನು .
ಕಮರುದ್ದೀನ್ ನನ್ನು ಬಂಧಿಸಿದ ಬೆನ್ನಿಗೆ ಪೂಕೋಯ ತಂಘಳ್ ತಲೆ ಮರೆಸಿಕೊಂಡಿದ್ದನು ಕಮರುದ್ದೀನ್ ಫ್ಯಾಶನ್ ಗೋಲ್ಡ್ ಜುವೆಲ್ಲರಿಯ ಅಧ್ಯಕ್ಷನಾಗಿದ್ದನು . ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ಹುಟ್ಟು ಹಾಕಿ ಸುಮಾರು ೭೪೯ ಮಂದಿಯಿಂದ ಠೇವಣಿ ಪಡೆದು ವಂಚನೆ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿದ್ದು , ೧೪೮ ಕ್ಕೂ
ಪ್ರಕರಣಗಳು ಈಗಾಗಲೇ ದಾಖಲಾಗಿವೆ.