News Karnataka Kannada
Monday, May 06 2024
ಕಾಸರಗೋಡು

ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣಾ ಆಯೋಗದಲ್ಲಿ 92 ದೂರು ಇತ್ಯರ್ಥ

Kasar
Photo Credit :

ಕಾಸರಗೋಡು : ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಬಿ.ಎಸ್.ಮಾವೋಜಿ ನೇತೃತ್ವದ ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣಾ ಆಯೋಗ  ನಡೆಸಿದ ಅದಾಲತ್ ನಲ್ಲಿ  92 ದೂರುಗಳನ್ನು ಇತ್ಯರ್ಥ ಗೊಳಿಸಿತು.

ಕಾಸರಗೋಡು ಪುರಸಭಾ ಸಮ್ಮೇಳನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕುಂದುಕೊರತೆ ನಿವಾರಣಾ ಅದಾಲತ್  ನಲ್ಲಿ  ಒಟ್ಟು 116 ದೂರುಗಳ ವಿಚಾರಣೆ ನಡೆಯಿತು.

ಈ ಪೈಕಿ 24 ದೂರುಗಳನ್ನು  ಪರಿಶೀಲನೆಗೆ  ಮುಂದೂಡಿದೆ.  ಹೆಚ್ಚಿನ ದೂರುಗಳು ಭೂಮಿಗೆ  ಸಂಬಂಧಪಟ್ಟವು ಆಗಿದ್ದು  ಅವುಗಳಲ್ಲಿ ಹೆಚ್ಚಿನವು ಭೂ ಸಮಸ್ಯೆಗಳು, ಗಡಿ ಗುರುತಿಸುವಿಕೆ ವಿವಾದಗಳು ಮತ್ತು ಸ್ಥಳ  ಪ್ರವೇಶಕ್ಕೆ ಅಡ್ಡಿ ಮೊದಲಾದವುಗಳಾಗಿ ದೂರು ಪರಿಹಾರ ನ್ಯಾಯಾಲಯದಲ್ಲಿ ನೇರವಾಗಿ 62 ದೂರುಗಳು ಲಭಿಸಿವೆ.

ಅವುಗಳನ್ನು ನಂತರ ಪರಿಗಣಿಸಲಾಗುವುದು. ಜಾತಿಯ ಹೆಸರಿನಲ್ಲಿ ಹಿಂಸಾಚಾರ, ಥಳಿತ, ನಿಂದನೆ ಪ್ರಕರಣಗಳು ಇತರ ಜಿಲ್ಲೆಗಳಿಗಿಂತ ಕಾಸರಗೋಡು ಜಿಲ್ಲೆಯಲ್ಲಿ ಕಡಿಮೆ ಎಂದು ಆಯೋಗ ಹೇಳಿದೆ.

75ರಷ್ಟು ಪ್ರಕರಣಗಳು ಇತ್ಯರ್ಥವಾಗಿವೆ ಎಂದರು. ಅದಾಲತ್‌ನಲ್ಲಿ ಯಶಸ್ವಿಯಾದ ಕಾಞಂಗಾಡ್‌ ಸಬ್‌ ಕಲೆಕ್ಟರ್‌ ಡಿ.ಆರ್‌.ಮೇಘಶ್ರೀ ಅವರನ್ನು ಆಯೋಗವು ವಿಶೇಷವಾಗಿ ಶ್ಲಾಘಿಸಿದ್ದು, ಅದಾಲತ್‌ನಲ್ಲಿ ಎರಡು ದಿನಗಳ ಕಾಲ ಆಯೋಗದೊಂದಿಗೆ ಪೂರ್ಣಾವಧಿ ಕೆಲಸ ಮಾಡಿದೆ.

ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯ ಎಸ್.ಅಜಯಕುಮಾರ್ , ಆಯೋಗದ ರಿಜಿಸ್ಟ್ರಾರ್ ಪಿ.ಶೆರ್ಲಿ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ , ಜಿಲ್ಲಾ ಪೊಲೀಸ್ ವರಿಷ್ಠ ವೈಭವ್ ಸಕ್ಸೇನಾ ಮತ್ತು ಕಾಞಂಗಾಡ್ ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್. ಮೀನಾ ರಾಣಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಅಧಿಕಾರಿ ಮಲ್ಲಿಕಾ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು